ಕಲಬುರಗಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕಲಬುರಗಿಗೆ ಆಗಮಿಸಲಿದ್ದು, ಪ್ರಧಾನಿ ಆಗಮನಕ್ಕೆ ರಾಷ್ಟ್ರಕೂಟರ ನಾಡು ಮಳಖೇಡ ಸಜ್ಜುಗೊಂಡಿದ್ದು, ಎಲ್ಲಾ ರೀತಿಯ ಸಿದ್ಧತೆ ಅಂತಿಮಗೊAಡಿದೆ.
ಬುಧವಾರ ಮಳಖೇಡದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ದೇಶದ ಇತಿಹಾಸದಲ್ಲಿಯೇ ಐತಿಹಾಸಿಕವಾಗಿ ರಾಜ್ಯದಾದ್ಯಂತ ಲಂಬಾಣಿ ತಾಂಡಾ, ಹಟ್ಟಿ, ಆಡಿ, ಗೊಲ್ಲರಹಟ್ಟಿ, ವಡ್ಡರ ಹಟ್ಟಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸುವ ದೃಷ್ಠಿಯಿಂದ ಕಲಬುರಗಿ-27,267, ಬೀದರ-7,500, ರಾಯಚೂರು-3,500, ಯಾದಗಿರಿ-11,200 ಹಾಗೂ ವಿಜಯಪುರ-2,605 ಸೇರಿದಂತೆ ಒಟ್ಟು 52,072 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಇದು ಗಿನ್ನಿಸ್ ದಾಖಲೆಯಾಗಲಿದೆ. ಶತಮಾನದಿಂದ ಸೂರಿನಿಂದ ವಂಚಿತ ಸಮುದಾಯಕ್ಕೆ ಪಕ್ಕಾ ಸೂರು ಕಲ್ಪಿಸುವ ಅಮೃತ ಘಳಿಗೆ ಇದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಯಾದಗಿರಿ ಜಿಲ್ಲೆಯ ಕೊಡೆಕಲ್ ತೆರಳಿ ನಾರಾಯಣಪುರ ಎಡದಂಡೆ ನಾಲೆ ನವೀಕರಣ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಚೈನೈ-ಸುರತ್ ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದಾರಿಯ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ನಂತರ ಮಧ್ಯಾಹ್ನ 2 ಗಂಟೆಗೆ ಸೇಡಂ ಜಿಲ್ಲೆಯ ಮಳಖೇಡಗೆ ಆಗಮಿಸಿ, ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಂಡ 342 ಗ್ರಾಮಗಳ 52,072 ಜನರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡುವರು ಎಂದರು.
ಕಾರ್ಯಕ್ರಮಕ್ಕೆ 3 ಲಕ್ಷ ಜನ ಸೇರುವುದರಿಂದ ಬೃಹತ್ ಜರ್ಮನ್ ಪೆಂಡಾಲ್ ಹಾಕಲಾಗಿದೆ. ಸಾರ್ವಜನಿಕರಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಲಂಬಾಣಿ ಮಹಿಳೆಯರು ತಮ್ಮ ವಿಶೇಷ ಉಡುಪಿನಲ್ಲಿ ಗಮನ ಸೆಳೆಯಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ರಾಜ್ಯಪಾಲ ತಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಸೇರಿದಂತೆ 18 ಜನ ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದರು.
ಪ್ರಧಾನಮAತ್ರಿಗಳ ಕಾರ್ಯಕ್ರಮ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಒಂಬತ್ತು ಐ.ಪಿ.ಎಸ್. ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ, ಕಲಬುರಗಿ ಮತ್ತು ಬೆಳಗಾವಿ ಐ.ಜಿ.ಪಿ., ಕಲಬುರಗಿ ಎಸ್.ಪಿ., ನಾಗನಹಳ್ಳಿ ಪಿ.ಟಿ.ಸಿ. ಎಸ್.ಪಿ. ಸೇರಿದಂತೆ 9 ಜನ ಐ.ಎ.ಎಸ್ ಅಧಿಕಾರಿಗಳು, 13 ಡಿ.ಎಸ್ಪಿ, 30 ಸಿಪಿಐ, 108 ಪಿ.ಎಸ್.ಐ., 16 ಕೆಎಸ್.ಆರ್.ಪಿ. ತುಕಡಿ, 6 ಡಿಎಆರ್ ತುಕುಡಿಗಳು ಬಂದೋಬಸ್ತ್ ಸಲುವಾಗಿ ನಿಯೋಜಿಸಲಾಗಿದೆ. ಇದಲ್ಲದೆ ಹೆಚ್ಚುರಿಯಾಗಿ ಗರುಡಾ ಫೋರ್ಸ್ ಸಹ ಇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ. ಅಲೋಕ ಕುಮಾರ್ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ನೋದಿ ಅವರು ಯಾದಗಿರಿಯ ಕೊಡೇಕಲ್ ಕಾರ್ಯಕ್ರಮದಲ್ಲಿ ಸೂರತ್-ಚೆನ್ನೈ ಗ್ರೀನ್ ಫೀಲ್ಡ್ ಹೈವೇ ವ್ಯಾಪ್ತಿ ಪೈಕಿ ಕಲಬುರಗಿ ಜಿಲ್ಲೆಯಲ್ಲಿ ಹಾದುಹೋಗುವ ಕಿ.ಮೀ.26 ರಿಂದ ಕಿ.ಮೀ.91ರ ವರೆಗಿನ ಒಟ್ಟು 71 ಕಿ.ಮೀ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕಿ.ಮೀ.97 ರಿಂದ ಕಿ.ಮೀ 162.500 ವರೆಗಿನ ಒಟ್ಟು 65.500 ಕಿ.ಮೀ ಆರು ಪಥ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 2,110.52 ಕೋಟಿ ರೂ. ಮತ್ತು ಯಾದಗಿರಿ ಜಿಲ್ಲೆಯಲ್ಲಿ 1,999.24 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಅಫಜಲಪೂರ ತಾಲೂಕಿನ ಬಡದಾಳ ಗ್ರಾಮದಿಂದ ಆರಂಭವಾಗುವ ರಾಜ್ಯದಲ್ಲಿನ ಆರು ಪಥದ ಈ ರಾಷ್ಟ್ರೀಯ ಹೆದ್ದಾರಿ ಮುಂದೆ ಗಾಣಗಾಪೂರ-ಜೇವರ್ಗಿ-ಮರಡಗಿ ಎಸ್.ಆಂದೋಲಾ ಮಾರ್ಗವಾಗಿ ಯಾದಗಿರಿ ಜಿಲ್ಲೆಯ ಅಣಬಿ- ಶಿರವಾಳ-ಬುರುಸಗುಂಡಗಿ-ಖಾನಾಪುರ-ವಡಗೇರಾ-ಬೆAಡೆಬೆAಬಳಿ ಮೂಲಕ ರಾಯಚೂರು ಜಿಲ್ಲೆಯ ಬಸವಂತಪೂರ ಪ್ರವೇಶಿಸಿ ಅಲ್ಲಿಂದ ಚಿಕ್ಕಸುಗೂರ-ಚಂದ್ರಬAಡಾ-ಸಿAಗಾನೋಡಿ ಮೂಲಕ ತೆಲಾಂಗಾಣದ ಕರ್ನೂಲಕ್ಕೆ ಸಾಗಲಿದೆ.