Share this news

ಕಾರ್ಕಳ : ತಾಲೂಕಿನ ಕಲ್ಯಾ ಎಂಬಲ್ಲಿಎ.6 ರಂದು ಜಾಗ ಸಮತಟ್ಟು ಮಾಡಲೆಂದು ನಿಲ್ಲಿಸಿದ್ದ ಹಿಟಾಚಿಗೆ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ.

ಜಾರ್ಕಳದ ದಿನೇಶ್ ಶೆಟ್ಟಿ ಎಂಬವರು ಕಲ್ಯಾಗ್ರಾಮದ ಪಟ್ಟಾಸ್ಥಳದಲ್ಲಿ ಜಾಗವನ್ನು ಸಮತಟ್ಟು ಮಾಡಲೆಂದು ಏಪ್ರಿಲ್ 6 ರಂದು ಸಂಜೆ ಟಾಟಾ ಹಿಟಾಚಿ ಯಂತ್ರವನ್ನು ನಿಲ್ಲಿಸಿ ಹೋಗಿದ್ದರು .

ಏಪ್ರಿಲ್ 7 ರಂದು ಬೆಳಿಗ್ಗೆ 9 ಗಂಟೆಗೆ ಬಂದು ನೋಡಿದಾಗ ಕಿಡಿಗೇಡಿಗಳು ಹಿಟಾಚಿ ಯಂತ್ರಕ್ಕೆ ಬೆಂಕಿ ಹಚ್ಚಿದ್ದು ಯಂತ್ರವು ಸುಟ್ಟು ಕರಕಲಾಗಿದ್ದು ಸುಮಾರು 15 ಲಕ್ಷ ರೂ ನಷ್ಟ ಸಂಭವಿಸಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *