Share this news

ಕಾರ್ಕಳ :ಈ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಹಾಗೂ ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆ 100% ಫಲಿತಾಂಶ ಗಳಿಸಿ ದಾಖಲೆ ನಿರ್ಮಿಸಿದೆ. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸ್ಮಯಾ ಸದಾನಂದ್ ಮಾಬೆನ್ ವಿಜ್ಞಾನ ವಿಭಾಗದಲ್ಲಿ 594 (99%) ಅಂಕಗಳಿಸಿ ರಾಜ್ಯಕ್ಕೆ 3ನೇ ರ‍್ಯಾಂಕ್ ಮತ್ತು ವಾಣಿಜ್ಯ ವಿಭಾಗದಲ್ಲಿ ಮಾನ್ಯ ಜೈನ್ 594 (99%) ಅಂಕ ಪಡೆಯುವುದರೊಂದಿಗೆ 4ನೇ ರ‍್ಯಾಂಕ್‌ ಪಡೆದಿರುತ್ತಾರೆ. ಜ್ಞಾನಸುಧಾ ಸಂಸ್ಥೆಗಳ 16 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 10ನೇ ರ‍್ಯಾಂಕಿನ ಒಳಗೆ ಸ್ಥಾನ ಪಡೆದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಸ್ಮಯಾ ಸದಾನಂದ ಮಾಬೆನ್ 99% (594), ಎಂ. ಆರ್. ಯಶಸ್‌ ರೆಡ್ಡಿ 98.50% (591), ಶ್ರೇಯಸ್. ಆರ್. ಗೌಡ 98.50% (591), ಸೃಷ್ಟಿ ಶೆಟ್ಟಿ 98.33% (590), ಹಿತೇಶ್‌ ಆರ್. ನಾಯಕ್ 98.17% (589), ಮಾನ್ಯಶ್ರೀ ಪಿ. 98.17% (589), ಸ್ಪಂದನ ಆರ್. ಶೆಟ್ಟಿ 98% (588), ಸುನಿಧಿ ಕಿಣಿ 98% (588) ಆದ್ಯಾ ದಯಾನಂದ ನಾಯಕ್ 97.84% (587), ಹೃಶಿಕ್ ಎಂ. ಹೆಗ್ಡೆ 97.84% (587) ಮತ್ತು ಜೀವನ್‌ರೆಡ್ಡಿ 97.84% (587), ಹಾಗೂ ವಾಣಿಜ್ಯ ವಿಭಾಗದಲ್ಲಿ ಮಾನ್ಯ ಜೈನ್ 99% (594), ಸಂಕೇತ್ ವಿ. ಕಾಮತ್ 98.50% (591), ಶರಣ್ಯ ಎಸ್. ಹೆಗ್ಡೆ 98.50% (591), ಕೆ. ಆಕಾಶ್ ಪೈ 98% (588) ಅಂಕ ಗಳಿಸಿರುತ್ತಾರೆ.

ಉಡುಪಿ ಜ್ಞಾನಸುಧಾ ಪಿ.ಯು.ಕಾಲೇಜು ತನ್ನ ಪ್ರಥಮ ವರ್ಷದಲ್ಲೇ ಶೇ. 100 ಫಲಿತಾಂಶ ಗಳಿಸಿದ್ದು ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಪೈ 98.16%(589) ಅಂಕ ಗಳಿಸಿದ್ದಾರೆ. ಒಟ್ಟು 632 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 526 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಷಯವಾರು 251 ಉತ್ತರ ಪತ್ರಿಕೆಗೆ 100ಕ್ಕೆ 100 ಅಂಕ ಬಂದಿರುತ್ತದೆ.
ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *