Share this news

ಕಾರ್ಕಳ: ಕಾರ್ಕಳ ಬಾರ್ ಅಸೋಸಿಯೇಷನ್ ಮಾಜಿ ಕೋಶಾಧಿಕಾರಿಯಾಗಿದ್ದ ನ್ಯಾಯವಾದಿ ಸಂಪತ್ ಕುಮಾರ್ (53) ಬುಧವಾರ (ಏಪ್ರಿಲ್19)ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾರ್ಕಳ ಬೈಪಾಸ್ ಬಳಿಯ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ಸಂಪತ್ ಕುಮಾರ್ ಕಾರ್ಕಳ ತಾಲೂಕು ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಸಮಾಜಮುಖಿ ಕಾರ್ಯದಲ್ಲಿ ಉತ್ತಮ ಹೆಸರು ಗಳಿಸಿದ್ದು, ಕಾರ್ಕಳ ತಾಲೂಕು ಕಚೇರಿಯಲ್ಲಿ ನೌಕರರಾಗಿರುವ ಪತ್ನಿ ನಾಗರತ್ನ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅವರ ಅಕಾಲಿಕ ನಿಧನಕ್ಕೆ ಕಾರ್ಕಳ ಬಾರ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ

Leave a Reply

Your email address will not be published. Required fields are marked *