ಕಾರ್ಕಳ: ಮುಂಗಾರು ಮಳೆ ತೀವ್ರಗೊಂಡಿದ್ದು ಕೊಲ್ಲೂರು ,ಸಿದ್ದಾಪುರ, ಅಮಾವಾಸ್ಯೆ ಬೈಲು ಹೆಬ್ರಿ, ಕಾರ್ಕಳ ಬೆಳ್ತಂಗಡಿ, ಕುದುರೆಮುಖ ಕೆರೆಕಟ್ಟೆ ವ್ಯಾಪ್ತಿಗಳ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರರನ್ನು ನಿರ್ಭಂದಿಸಿ ಕಾರ್ಕಳ ಕುದುರೆ ಮುಖ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅದೇಶ ಹೊರಡಿಸಿದ್ದಾರೆ. ಮುಂದಿನ ಅದೇಶದವರೆಗೆ ಸಾರ್ವಜನಿಕರಿಗೆ ಜಲಪಾತ ವೀಕ್ಷಿಸಲು ಅನುಮತಿ ವಿರುವುದಿಲ್ಲ.
ಜಲಪಾತಗಳ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಿ ಆ ಪ್ರದೇಶದಲ್ಲಿ ಅಗತ್ಯಕಾವಲುಗಾರರನ್ನು ನೇಮಿಸಿ ಪ್ರವೇಶವನ್ನು ನಿರ್ಬಂದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.