Share this news

ಕಾರ್ಕಳ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡ ರಕ್ಷಣೆ ಮಾಡಿರುವ ಘಟನೆ ಗುರುವಾರ ರಾತ್ರಿ ಕೆದಿಂಜೆ ಎಂಬಲ್ಲಿ ನಡೆದಿದೆ.


ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಕೆದಿಂಜೆಯ ಕುಂಟಲಗುಂಡಿ ನಿವಾಸಿ ಹರಿಣಾಕ್ಷಿ(39) ಎಂಬವರು ರಕ್ಷಿಸಲ್ಪಟ್ಟ ಮಹಿಳೆ. ಹರಿಣಾಕ್ಷಿ ಗುರುವಾರ ಮಧ್ಯಾಹ್ನ ತಮ್ಮ ಮನೆಯ ಸಮೀಪದ ಆವರಣವಿಲ್ಲದ ಬಾವಿಯಿಂದ ನೀರು ತರಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ 35 ಅಡಿ ಆಳದ ಬಾವಿಗೆ ಬಿದ್ದಿದ್ದರು.10 ಅಡಿ ನೀರಿದ್ದ ಬಾವಿಯಲ್ಲಿ ಹರಿಣಾಕ್ಷಿ ಬಾವಿಗೆ ಅಳವಡಿಸಲಾಗಿದ್ದ ಪಂಪಿನ ಹಗ್ಗ ಹಿಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಬಾವಿಗೆ ಬಿದ್ದ ಹರಿಣಾಕ್ಷಿ ರಕ್ಷಣೆಗಾಗಿ ಕೂಗಿದಾಗ ಮನೆಮಂದಿ ಬಂದು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ‌ ನೀಡಿದ್ದಾರೆ.


ಘಟನಾ ಸ್ಥಳಕ್ಕೆ ಕಾರ್ಕಳ ಅಗ್ನಿಶಾಮಕ ದಳದವರು ಹಾಗೂ ಕಾರ್ಕಳ ಆರಕ್ಷಕ ಠಾಣೆಯವರು ಧಾವಿಸಿ, ಕಾರ್ಯಾಚರಣೆ ಒಂದು‌ ಗಂಟೆ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೊನಿಸ್, ಅಗ್ನಿಶಾಮಕ ಸಿಬ್ಬಂದಿಗಳಾದ ಹರಿಪ್ರಸಾದ್ ಶೆಟ್ಟಿಗಾರ್,ಉದಯಕುಮಾರ್ ಹೆಗ್ಡೆ, ಜಯ ಮೂಲ್ಯ ,ಮನೋಹರ್ ಪ್ರಸಾದ್, ಹಸನ್ ಸಾಬ್ ಮುಲ್ತಾನಿ,ಗೃಹರಕ್ಷಕದಳದ ಸದಾನಂದ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *