ಕಾರ್ಕಳ: ಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ಶಿಕ್ಷೆ ವಿಧಿಸಿ ಕಾರ್ಕಳ ನ್ಯಾಯಾಲಯ ತೀರ್ಪು ನೀಡಿದೆ.
ಕಾರ್ಕಳ ತಾಲೂಕು ಕಚೇರಿ ಬಳಿಯ ಗಂಗಾ ಬೋರ್ ವೆಲ್ಸ್ ನ ವಾಸುದೇವ ಶೆಟ್ಟಿಗಾರ್ ಅವರು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅರಳಿಮನೆ ಪ್ರಕಾಶ್ ಗೌಡ ನೀಡಿದ ಚೆಕ್ ಗಳು ಅಮಾನ್ಯ ಎಂದು ಕಾರ್ಕಳ ನ್ಯಾಯಾಲಯದಲ್ಲಿ ಪ್ರಕರಣದ ದಾಖಲಿಸಿದ್ದರು.
ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚೇತನ ಎಸ್.ಎಫ್ ಅವರು ಪ್ರಕಾಶ್ ಗೌಡನನ್ನು ದೋಷಿ ಎಂದು ಪರಿಗಣಿಸಿ 1.50 ಲಕ್ಷ ರೂ ಪಾವತಿಸಬೇಕು ತಪ್ಪಿದ್ದಲ್ಲಿ 6 ತಿಂಗಳು ಸಜೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಾಸುದೇವ ಶೆಟ್ಟಿಗಾರ್ ಪರವಾಗಿ ನ್ಯಾಯವಾದಿ ಎನ್ ಶಿವಾನಂದ ನಾಯಕ್ ಅವರು ವಾದಿಸಿದ್ದರು.