ಕಾರ್ಕಳ : ಚೇತನಾ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವಶ್ಯಕತೆಯಿರುವ ಹಾಗೂ ಅವರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅನೂಕೂಲವಾಗುವ ಶಟಲ್ ಕೋರ್ಟ್ ಹಾಗೂ ನೂತನ ಸೆನ್ಸರಿ ಪಾತ್ ಇದರ ಉದ್ಘಾಟನಾ ಕಾರ್ಯಕ್ರಮವು ನಾಳೆ (ಜ.26) ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಪ್ಲಾಂಟ್- ಟೆಕ್ ಇಂಡಸ್ಟಿçÃಯಲ್ ಸರ್ವಿಸಸ್ ಲಿಮಿಟೆಡ್ನ ಸಿ.ಇ.ಓ ಶ್ರೀ ಅಭಯ್ ತರ್ಥೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.