ಕಾರ್ಕಳ: ಉಡುಪಿ ಕಾರ್ಕಳ ರಸ್ತೆಯ ಕಾರ್ಕಳ ತಾಲೂಕು ಕಚೇರಿ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣವಾಗಿರುವ ಹೋಟೆಲ್ ಬಾಲಾಜಿ ಇನ್ ಇದರ ಉದ್ಘಾಟನಾ ಸಮಾರಂಭವು ಜನವರಿ 8ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ .
ಹೋಟೆಲ್ ಬಾಲಾಜಿ ಇನ್ ಕಾರ್ಕಳ ಬಂಡಿಮಠ ಬಸ್ಸು ನಿಲ್ದಾಣ ಹಾಗೂ ತಾಲೂಕು ಕಚೇರಿಗೆ ಹೊಂದಿಕೊಂಡಿದ್ದು, ಬೋರ್ಡಿಂಗ್ & ಲಾಡ್ಜಿಂಗ್ ಸೌಕರ್ಯವನ್ನು ಒಳಗೊಂಡಿದೆ. ಇದರಿಂದ ಸುಸಜ್ಜಿತ ವಿಶಾಲ ಆಸನದ ಸಾಮರ್ಥ್ಯದ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಸ್ಥೆ, 800 ಆಸನ ಸಾಮರ್ಥ್ಯದ ವೆಡ್ಡಿಂಗ್ ಹಾಲ್ ಹಾಗೂ 300 ಆಸನ ಸಾಮರ್ಥ್ಯದ ಬ್ಯಾಂಕ್ವೆಟ್ ಹಾಲ್ ಒಳಗೊಂಡಿದೆ.ಇದಲ್ಲದೇ ಪ್ರಮುಖವಾಗಿ ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆಯಿದ್ದು, ಕಾರ್ಕಳ ಹೃದಯಭಾಗದಲ್ಲಿ ಬಾಲಾಜಿ ಇನ್ ಹೊಟೇಲ್ ಶುಭಾರಂಭಗೊಳ್ಳಲಿದ್ದು ಸಕಲ ಸೌಕರ್ಯಗಳೊಂದಿಗೆ ಗ್ರಾಹಕರ ಸೇವೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಮಾಲಕ ಸತೀಶ್ ಹೆಗ್ಡೆ ತಿಳಿಸಿದ್ದಾರೆ.
ನಿಟ್ಟೆ ವಿಶ್ವವಿದ್ಯಾನಿಲಯದ ಚಾನ್ಸಲರ್ ಹಾಗೂ ಲಮೀನಾ ಗ್ರೂಪ್ ಆಫ್ ಕಂಪನಿಸ್ ಅಧ್ಯಕ್ಷ ಡಾ. ವಿನಯ್ ಹೆಗಡೆ ನೂತನ ಬಾಲಾಜಿ ಇನ್ ಹೋಟೆಲ್ ಅನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂಧನ ಸಚಿವ ವಿ ಸುನಿಲ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ,ನಿಟ್ಟೆ ಕಾಲೇಜಿನ ನಿರ್ದೇಶಕ ಯೋಗೀಶ್ ಹೆಗ್ಡೆ, ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಉದ್ಯಮಿಗಳಾದ ಬೋಳ ಶ್ರೀನಿವಾಸ್ ಕಾಮತ್, ಅಶೋಕ್ ಅಡ್ಯಂತಾಯ, ನ್ಯಾಯವಾದಿ ಶೇಖರ ಮಡಿವಾಳ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ, ಮುಖ್ಯಾಧಿಕಾರಿ ರೂಪಾ ಶೆಟ್ಟಿ,ಕರ್ನಾಟಕ ರಾಜ್ಯ ಹಣಕಾಸು ನಿಗಮದ ಉಡುಪಿ ಜಿಲ್ಲಾ ಮ್ಯಾನೇಜರ್ ಪ್ರಸಾದ್ ರಾಜ್ ರೆಡ್ಡಿ ಭಾಗವಹಿಸಲಿದ್ದಾರೆಂದು ಹೊಟೇಲ್ ಬಾಲಾಜಿ ಇನ್ ಸಂಸ್ಥೆಯ ಮಾಲಕ ಸತೀಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ