Share this news

ನಿಟ್ಟೆ: ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1994ರ ಬ್ಯಾಚಿನ ಸಿಲ್ವರ್ ರಿಯೂನಿಯನ್ ಹಾಗೂ ಹಳೆವಿದ್ಯಾರ್ಥಿ ಸಂಘವಾದ ವೆನಾಮಿತಾ ಆಯೋಜಿಸಿದ್ದ ಗ್ಲೋಬಲ್ ಅಲುಮ್ನಿ ರಿಯೂನಿಯನ್ ಕಾರ್ಯಕ್ರಮವು ಡಿ 30 ರಂದು ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ ಭಾಗವಹಿಸಿದ್ದರು. ಸಂಸ್ಥೆಯ ನಿರಂತರ ಯಶಸ್ಸಿನಲ್ಲಿ ಹಳೆಯ ವಿದ್ಯಾರ್ಥಿಗಳ ಪ್ರಮುಖ ಪಾತ್ರವನ್ನು ಡಾ. ಮುಗೆರಾಯ ಪ್ರಸ್ತಾಪಿಸಿದ್ದಲ್ಲದೇ ಸಾಂಸ್ಥಿಕ ಬೆಳವಣಿಗೆಗೆ ನೆಟ್ ವರ್ಕಿಂಗ್ ನ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಎಂಎಎಂಐಟಿಯ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಣ್ಕರ್ ವಹಿಸಿ ಮಾತನಾಡಿ, ಸಂಸ್ಥೆಯು ಬೆಳೆದುಬಂದ ಹಾದಿಯ ಕುರಿತು ಅನುಭವ ಹಂಚಿಕೊಂಡರು ಮತ್ತು ಮುಂಬರುವ ಕಾರ್ಯಕ್ರಮಗಳ ಬಗ್ಗೆ ಒಂದು ನೋಟವನ್ನು ನೀಡಿದರು.

ಕಾರ್ಯಕ್ರಮದ ಪ್ರಮುಖ ಅಂಶವೆಂದರೆ 1994 ರ ಬ್ಯಾಚ್ ನ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಅವರು ಹಂಚಿಕೊಂಡ ಅವರ ವಿದ್ಯಾರ್ಥಿ ಜೀವನದ ನೆನಪು ಅವರು ಎನ್ಎಂಎಎಂಐಟಿಯಲ್ಲಿ ತಮ್ಮ ಸಮಯದ ಅಮೂಲ್ಯ ನೆನಪುಗಳು ಮತ್ತು ಅನುಭವಗಳನ್ನು ಹಂಚಿಕೊಂಡರು, ಅವರ ಯಶಸ್ವಿ ವೃತ್ತಿಜೀವನವನ್ನು ರೂಪಿಸುವಲ್ಲಿ ಸಂಸ್ಥೆಯ ಆಳವಾದ ಪ್ರಭಾವವನ್ನು ವಿವರಿಸಿದರು.

ವೆನಾಮಿತಾದ ಅಧ್ಯಕ್ಷೆ ಡಾ.ಪ್ರಭಾ ನಿರಂಜನ್ ಸ್ವಾಗತಿಸಿ ಸಂಘವು ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಅವಲೋಕನವನ್ನು ನೀಡಿದರು. ವೆನಾಮಿತಾದ ಉಪಾಧ್ಯಕ್ಷ ಮಂಜುಕಿರಣ್ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಡಾ.ಅನುಷಾ ಮತ್ತು ನಚಿಕೇತ ನಾಯಕ್ ನಿರೂಪಿಸಿದರು.

ಕಲಾಂಜಲಿ ಕ್ಲಬ್ ನ ವಿದ್ಯಾರ್ಥಿಗಳು ಆಕರ್ಷಕ ಸ್ವಾಗತ ನೃತ್ಯದೊಂದಿಗೆ ಪ್ರೇಕ್ಷಕರನ್ನು ಮೋಡಿ ಮಾಡಿದರು. ಸ್ಟಿರಿಯೊ ಕ್ಲಬ್ ಸದಸ್ಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು, ಸಭಿಕರನ್ನು ರಂಜಿಸಿದರು ಮತ್ತು ಹಬ್ಬದ ವಾತಾವರಣಕ್ಕೆ ಕೊಡುಗೆ ನೀಡಿದರು.

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *