Share this news
ಕಾರ್ಕಳ ಡಿ,15: ನೀರೆ ಗ್ರಾಮ ಪಂಚಾಯತಿಯ ಮಕ್ಕಳ ಗ್ರಾಮ ಸಭೆಯು ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಡಿ.15 ರಂದು ಶುಕ್ರವಾರ ನಡೆಯಿತು.
 ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕನಾದ  ಇತಾನ್ ಮಕ್ಕಳ ಗ್ರಾಮಸಭೆಯ  ಅಧ್ಯಕ್ಷತೆ ವಹಿಸಿದ್ದರು.
 ಮಕ್ಕಳ ಗ್ರಾಮಸಭೆಯಲ್ಲಿ  ನೀರೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂಕಿತಾ ನಾಯಕ್ ಮಕ್ಕಳ ಗ್ರಾಮಸಭೆಯ ಮಹತ್ವದ ಬಗ್ಗೆ ತಿಳಿಸಿದರು   ಪಡಿಸಂಸ್ಥೆಯ   ಶೋಭಾ  ಭಾಸ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳ ಕಾನೂನಿನ  ಅರಿವು, ಅವಶ್ಯಕ ಹಕ್ಕುಗಳ ಜೊತೆಗೆ ರಕ್ಷಣೆ ಹಾಗೂ ಆರೋಗ್ಯ  ರಕ್ಷಣೆಯ  ಬಗ್ಗೆ ತಿಳಿಸಿದರು. ಆರೋಗ್ಯ ಸಹಾಯಕಿ ಜಯಶ್ರೀ ಪೌಷ್ಟಿಕ  ಆಹಾರ, ಶುಚಿತ್ವ, ದೈನಂದಿನ ಆರೋಗ್ಯ ಕಾಪಾಡುವಂತೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಸುಜಾತ ಶೆಟ್ಟಿ ಅಂಗನವಾಡಿಯಲ್ಲಿ ಮಕ್ಕಳಿಗ ಹಾಗೂ ಬಾಣಂತಿಯರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು. ಗ್ರಾಮ ಪಂಚಾಯತ್ ನ  ಅಧ್ಯಕ್ಷ  ಸಚ್ಚಿದಾನಂದ ಪ್ರಭು ಗ್ರಾಮ ಸಭೆಯಲ್ಲಿ ಮಕ್ಕಳು  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು  ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ 9ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಸಾಂಜಾಲಿ ಇವರು  ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಒದಗಿಸುವಂತೆ ಮನವಿ ಮಾಡಿದರು, ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯತ್  ಅಧ್ಯಕ್ಷರು ಕೂಡಲೇ ಕುಡಿಯುವ ನೀರಿನ ಟ್ಯಾಂಕ್ ನೀಡಲಾಗುವುದೆಂದು ಭರವಸೆ ನೀಡಿದರು. 
ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಸರಕಾರಿ ಪದವಿ ಪೂರ್ವ ಕಾಲೇಜು, ಬೈಲೂರಿನ ದೈಹಿಕ ಶಿಕ್ಷಕ ಫೆಡ್ರಿಕ್ ರೆಬೆಲ್ಲೋ, ನೀರೆ ಹೆದ್ದಾರಿ ಶಾಲೆಯ ಶಿಕ್ಷಕಿಯರಾದ  ಗೀತಾ, ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಜಾಸ್ಮಿನ್ ಪಿಂಟೋ, ಸಂಚಾಲಕ ಹೆರಾಲ್ಡ್ ಪಿರೇರಾ, ಆಶಾಕಾರ್ಯಕರ್ತೆಯರು,  ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸಿಬ್ಬಂದಿ ವರ್ಗದವರು ಸಹಕರಿಸಿದರು

Leave a Reply

Your email address will not be published. Required fields are marked *