Share this news

ಹೊಸಪೇಟೆ: ಇಲ್ಲಿನ ಮೈಲಾರ ಲಿಂಗದಲ್ಲಿ ನಡೆಯುವ ಕಾರ್ಣೀಕ ನುಡಿ ಜಗತ್  ಪ್ರಸಿದ್ದಿಯಾಗಿದ್ದು , ಇಂದು ನಡೆದ ಕಾರ್ಣೀಕದಲ್ಲಿ ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್ ಎಂಬುದಾಗಿ ಗೊರವಯ್ಯ ಕಾರ್ಣಿಕ ನುಡಿ ನುಡಿದ್ದಿದ್ದು, ಈ ರಾಜ್ಯ, ದೇಶವನ್ನು ನಿಷ್ಠೆ, ಪ್ರಾಮಾಣಿಕ ವ್ಯಕ್ತಿ ಆಳುತ್ತಾನೆ  ಎಂದು  ಭವಿಷ್ಯ ನುಡಿದಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವ ಮೈಲಾರ ಕ್ಷೇತ್ರದಲ್ಲಿ ಇಂದು ವರ್ಷದ ಕಾರ್ಣಿಕೋತ್ಸವ ನಡೆಯಿತು. ಈ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ ಕಾರ್ಣೀಕ ಕಂಬವನ್ನೇರಿ ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್  ಎಂದು ನುಡಿದ್ದಾರೆ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನುಡಿದ ಈ ಕಾರ್ಣಿಕ ನುಡಿಯನ್ನು ಮೈಲಾರ ಲಿಂಗೇಶ್ವರ ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದ್ದು, ಈ ರಾಜ್ಯ, ರಾಷ್ಟ್ರವನ್ನು ಪ್ರಾಮಾಣಿಕ, ನಿಷ್ಠೆಯಿಂದ ಇರುವ ವ್ಯಕ್ತಿ ಆಳುತ್ತಾನೆ ಎಂದರು.

ಮಳೆ, ಬೆಳೆ ಹೆಚ್ಚಾಗಿ, ಸಮೃದ್ಧಿಯಾಗಲಿದೆ. ಈ ಬಾರಿ ರೈತರಿಗೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮಳೆಯೂ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎಂಬುದಾಗಿಯೂ ವಿಶ್ಲೇಷಿಸಿದ್ದಾರೆ.

Leave a Reply

Your email address will not be published. Required fields are marked *