Share this news

ಬೆಂಗಳೂರು :  ಅಥಣಿ ಕ್ಷೇತ್ರದಲ್ಲಿ ಟಿಕೆಟ್‌ ಮಿಸ್‌ ಆದ ಬೆನ್ನಲ್ಲೆ ಬಿಜೆಪಿಗೆ ರಾಜೀನಾಮೆ ನೀಡಿದ ಲಕ್ಷ್ಮಣ್‌ ಸವದಿ ಇಂದು  ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದಾರೆ . ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌,  ಸುರ್ಜೇವಾಲ ಜೊತೆ ಒಂದೇ ಕಾರಿನಲ್ಲಿ ಲಕ್ಷ್ಮಣ್‌  ಸವದಿ ಆಗಮಿಸಿದ್ದು, ಸವಧಿ ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌ ಅನ್ನುವುದು ಮೇಲ್ನೋಟಕ್ಕೆ ಕಾ‌ಣುತ್ತಿದೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಬೆನ್ನಲ್ಲೆ ಇಂದು ರಾಜ್ಯ ರಾಜಕೀಯಲ್ಲಿ ಭಾರೀ ಬೆಳವಣಿಗೆ  ನಡೆಯುತ್ತಿದೆ.  ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಲಕ್ಷ್ಮಣ್‌  ಸವದಿಯವರನ್ನು ಡಿಕೆಶಿ ಅವರು ಕರೆತಂದಿದ್ದಾರೆ. ಅದರಲ್ಲೂ  ಡಿ.ಕೆ.ಶಿವಕುಮಾರ್‌,  ಸುರ್ಜೇವಾಲ ಜೊತೆ ಒಂದೇ ಕಾರಿನಲ್ಲಿ ಲಕ್ಷ್ಮಣ್‌ ಸವಧಿ ಆಗಮಿಸಿದ್ದಾರೆ. ಲಕ್ಷ್ಮಣ್‌  ಸವದಿಎಲ್ಲಾ ಡಿಮ್ಯಾಂಡ್‌ಗೆ ಕಾಂಗ್ರೆಸ್‌ ಒಪ್ಪಿದ್ಯಾ ಅನ್ನೋದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *