Share this news

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ರಾಮನಗರ ಬುಳೇರಿ ಮೊಗ್ರು, ಮುರ ಶ್ರೀ ರಾಮ ಭಜನಾ ಮಂದಿರದ ಹಿಂದೂ ಧರ್ಮಪ್ರೇಮಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಜರುಗಿತು. ಶಂಖನಾದ ಮತ್ತು ದೀಪಪ್ರಜ್ವಲನೆಯ ಮೂಲಕ ಸಭೆಗೆ ಚಾಲನೆ ನೀಡಲಾಯಿತು. .

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರರಾದ ಚಂದ್ರ ಮೊಗೇರ ಮಾತನಾಡಿ, ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಸಮಾನತೆ, ಬಂಧುತ್ವ ಮತ್ತು ನ್ಯಾಯ ಸಿಗುವುದೆಂದು ಹೇಳಲಾಗಿದೆ.ಆದರೆ ಈ ದೇಶದಲ್ಲಿ ಯಾವಾಗಲೂ ಹಿಂದೂಗಳ ಮೇಲೆ ಭೇದಭಾವ ಮಾಡಲಾಗುತ್ತಿದೆ. ಸರಕಾರದಿಂದ ಅನುದಾನ ಪಡೆಯುವ ಮದರಸಗಳಲ್ಲಿ, ಕಾನ್ವೆಂಟ್ಗಳಲ್ಲಿ ಅವರ ಧರ್ಮದ ಬಗ್ಗೆ ಕಲಿಸಬಹುದು ಆದರೆ ಹಿಂದೂ ಧರ್ಮದ ಬಗ್ಗೆ , ಸಂಸ್ಕೃತಿಯ ಬಗ್ಗೆ ಕಲಿಸಲು ನಿರ್ಬಂಧ ಇರುತ್ತದೆ. ಭಾರತೀಯ ಸಂವಿಧಾನದಲ್ಲಿ ನಾಗರಿಕರಿಗೆ ಸುರಕ್ಷತೆಯ ಬಗ್ಗೆ ಆಶ್ವಾಸನೆ ನೀಡಿದ್ದರೂ 32 ವರ್ಷಗಳಿಂದ ಕಾಶ್ಮೀರಿ ಹಿಂದೂಗಳಿಗೆ ಅವರ ಮಾತೃಭೂಮಿಯಲ್ಲಿ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ ಎಂದರು.

ಕಲA 370 ರದ್ದು ಮಾಡಲಾಗಿದೆ. ಆದರೂ ಕಾಶ್ಮೀರ ಇಂದಿಗೂ ಭಯೋತ್ಪಾದಕತೆಯಿಂದ ಮುಕ್ತವಾಗಿಲ್ಲ. ಪುನಃ ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡ ಪ್ರಾರಂಭವಾಗಿದೆ. ಧರ್ಮಾಚರಣೆಯಿಂದ ಆತ್ಮಬಲ ನಿರ್ಮಾಣವಾಗುತ್ತದೆ. ಧರ್ಮದ ಎಲ್ಲಾ ಮಂತ್ರ ರಾಷ್ಟ್ರ ಕಲ್ಯಾಣ ಮತ್ತು ವಿಶ್ವಕಲ್ಯಾಣವಾಗಿದೆ. ಹಿಂದೂಗಳೇ ಹಿಂದೂ ಧರ್ಮವನ್ನು ಅರಿಯಿರಿ, ಧರ್ಮದಲ್ಲಿ ಜೀವಿಸಿರಿ, ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸಹಭಾಗಿಯಾಗಿರಿ ಎಂದು ಕರೆ ನೀಡಿದರು.

ಹಿಂದೂ ಜಾಗರಣ ವೇದಿಕೆ, ಕರ್ನಾಟಕ ದಕ್ಷಿಣ ಪ್ರಾಂತ್ಯ ಮಾತೃಸುರಕ್ಷಾ ಪ್ರಮುಖ್ ಗಣರಾಜ ಭಟ್ ಕೆದಿಲ ಮಾತನಾಡಿ, ನಮ್ಮ ದೇಶವನ್ನು ಮಾತೆಯ ರೂಪದಲ್ಲಿ ಮತ್ತು ಮಾತೃ ಸಂಸ್ಕೃತಿಯನ್ನು ಪೂಜನೀಯ ಸ್ಥಾನದಲ್ಲಿ ಪೂಜಿಸುವ ಮತ್ತು ಆರಾಧಿಸುವ ಶ್ರೇಷ್ಠ ಧರ್ಮ ಹಿಂದೂ ಧರ್ಮ. ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ಯುವತಿಯರನ್ನು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆ. ಮನೆಯಲ್ಲಿ ಹೆತ್ತವರಿಗೆ ಧಾರಾವಾಹಿ ನೋಡಲು ಮತ್ತು ಅದರ ಬಗ್ಗೆ ಇತರರಲ್ಲಿ ಚರ್ಚೆ ಮಾಡಲು ಸಮಯ ಇರುತ್ತದೆ ಆದರೆ ತನ್ನ ಹದಿಹರೆಯದ ಮಗಳ ಚಲನವಲನಗಳನ್ನು ಗಮನಿಸಲು ಅವಳ ಬಗ್ಗೆ ಕಾಳಜಿ ವಹಿಸಲು ಸಮಯ ಇರುವುದಿಲ್ಲ, ಈ ಬಗ್ಗೆ ಹೆತ್ತವರಲ್ಲಿ ಮತ್ತು ಲವ ಜಿಹಾದ್ ಬಗ್ಗೆ ಯುವತಿಯಲ್ಲಿ ಜನಜಾಗೃತಿ ಮೂಡಿಸಬೇಕಾಗಿದೆ ಎಂದರು.

ಸಭೆಯಲ್ಲಿ ಶಾಸಕರಾದ ಹರೀಶ್ ಪೂಂಜ, ಧರ್ಮಪ್ರೇಮಿಗಳಾದ ಜಯಪ್ರಸಾದ್ ಕಡಮ್ಮಾಜೆ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೊಟ್ಯಾನ್, ನಿವೃತ್ತ ಶಿಕ್ಷಕ ಸತ್ಯಶಂಕರ್ ಭಟ್ ಸರಳಿ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಜಗದೀಶ್ ಶೆಟ್ಟಿ ಕರಾಯ, ಉಪ್ಪಿನಂಗಡಿ ವಿ.ಹಿಂ.ಪ ಕಾರ್ಯದರ್ಶಿ ರಾಜಶೇಖರ್ ರೈ ಮತ್ತಿತರರು ಉಪಸ್ಥಿತರಿದ್ದರು.
ನವಿನಾ ಮತ್ತು ಪಾರ್ವತಿ ನಿರೂಪಿಸಿದರು.

Leave a Reply

Your email address will not be published. Required fields are marked *