Share this news

ಹೆಬ್ರಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಏಪ್ರಿಲ್19 ರಂದು ನಾಮಪತ್ರ ಸಲ್ಲಿಸಲಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕ ದಿ.ಎಚ್ .ಗೋಪಾಲ ಭಂಡಾರಿ ಅವರ ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದಾರೆ.


ಸುನಿಲ್ ಕುಮಾರ್ ಭಾನುವಾರ ಬೆಳಗ್ಗೆ ದಿ.ಗೋಪಾಲ ಭಂಡಾರಿಯವರ ಚಾರ ಹುತ್ತುರ್ಕೆಯ ನಿವಾಸಕ್ಕೆ ತೆರಳಿ ಭಂಡಾರಿಯವರ ಪತ್ನಿ ಪ್ರಕಾಶಿನಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಆಹ್ವಾನ ಪತ್ರ ನೀಡಿದರು.
ಈ‌ ಸಂದರ್ಭದಲ್ಲಿ ಭಂಡಾರಿಯವರ ಸಹೋದರ ರಾಜೇಶ್ ಭಂಡಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *