Share this news

ಕಾರ್ಕಳ: ತಾಲೂಕಿನ ಮಾಳ ಎಂಬಲ್ಲಿರುವ ಜಾರಿಗೆ ನದಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರಂಭವಾಗಿದ್ದು,ಕಳೆದ ಒಂದು ತಿಂಗಳಿನಿAದ ನದಿಯಲ್ಲಿನ ಕಲ್ಲನ್ನು ಹಿಟಾಚಿ ಬ್ರೇಕರ್ ಮೂಲಕ ತೆಗೆಯಲಾಗುತ್ತಿದೆ.


ವನ್ಯಜೀವಿ ವ್ಯಾಪ್ತಿಯ ಒಂದು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಮಾಡುವಂತಿಲ್ಲ ಎಂದು ಹಸಿರು ನ್ಯಾಯಪೀಠ ಆದೇಶ ನೀಡಿದ್ದರೂ, ಕುದುರೆಮುಖ ವನ್ಯಜೀವಿ ವ್ಯಾಪ್ತಿಯಲ್ಲಿ ಒಂದಾದ ಈ ನದಿಯಲ್ಲಿ ಕಲ್ಲು ಗಣಿಗಾರಿಕೆ ಆರಂಭವಾಗಿದೆ. ಇದರಿಂದ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ತುಂಬಾ ತೊಂದರೆಯುAಟಾಗುತ್ತಿದೆ .

ಇಲ್ಲಿ ಗಣಿಗಾರಿಕೆ ನಡೆಯುತ್ತಿರುವ ವಿಚಾರ ತಿಳಿದಿದ್ದರೂ ವನ್ಯಜೀವಿ ವಿಭಾಗದ ಅಧಿಕಾರಿಗಳು ಏನೂ ತಿಳಿಯದವರಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ.ಅಲ್ಲದೆ ನದಿಯಲ್ಲಿ ನಡೆಯುತ್ತಿರುವ ಈ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಈವರೆಗೆ ಯಾವುದೇ ವನ್ಯಜೀವಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *