Share this news

ಕಾರ್ಕಳ: ಕಳೆದ ಹಲವು ವರ್ಷಗಳಿಂದ ರಕ್ತದೊತ್ತಡ ಹಾಗೂ ಡಯಾಬಿಟೀಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತೀವೃ ಉಸಿರಾಟ ಸಮಸ್ಯೆಯಿಂದ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಎಂಬಲ್ಲಿ ನಡೆದಿದೆ
ಮಿಯ್ಯಾರಿನ ಸದಾನಂದ ಆಚಾರ್ಯ(45) ಎಂಬವರು ಮೃತಪಟ್ಟವರು. ಅವರು ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ತಯಾರಿಸುವ ಕೆಲಸ ಮಾಡಿಕೊಂಡಿದ್ದು,ಕೆಲಸದ ಒತ್ತಡದ ನಡುವೆ ಮದ್ಯಪಾನ ಮಾಡುತ್ತಿದ್ದರು. ಮದ್ಯಪಾನದಿಂದ ಅವರ ರಕ್ತದೊತ್ತಡ ಏರುಪೇರಾಗಿ ಜ್ವರ ಹಾಗೂ ವಿಪರೀತ ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ಫೆ4ರಂದು ಮನೆಗೆ ಬಂದವರಿಗೆ ರಾತ್ರಿ ಏಕಾಎಕಿ ಉಸಿರಾಟದ ಸಮಸ್ಯೆ ಉಲ್ಬಣಿಸಿದ ಪರಿಣಾಮ ತಕ್ಷಣವೇ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೇ ಸದಾನಂದ ಆಚವಾರ್ಯ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 
 

 

 
 

Leave a Reply

Your email address will not be published. Required fields are marked *