Share this news

ಮೂಡಬಿದಿರೆ: ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಗುರುಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಕ್ಸಲೆಂಟ್ ಆಡಳಿತ ನಿರ್ದೇಶರಾದ ಡಾಕ್ಟರ್ ಸಂಪತ್ ಕುಮಾರ್ ಮಾತನಾಡಿ, ಜ್ಞಾನದಿಂದ ದೇಶದ ಭವಿಷ್ಯ ರೂಪಿಸಬಹುದು. ಅಂತಹ ಜ್ಞಾನ ನೀಡುತ್ತಿರುವ ಎಲ್ಲಾ ಗುರುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.

ಸAಸ್ಥೆಯ ಏಳಿಗೆಯಲ್ಲಿ ಸದಾ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಗುರುಗಳಾದ ಡಾಕ್ಟರ್ ಸಂಪತ್ ಕುಮಾರ್ ಹಾಗೂ ಪುಷ್ಪರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *