Share this news

ಮೂಡಬಿದಿರೆ :ವಿದ್ಯಾರ್ಥಿಜೀವನ ಎನ್ನುವುದು ಸ್ವರ್ಗವಿದ್ದಂತೆ ಕಾಲೇಜಿನಲ್ಲಿ ಹಲವಾರು ನಿಮ್ಮನ್ನು ದಾರಿತಪ್ಪಿಸುವ ಸಾಕಷ್ಟು ವಿಚಾರಗಳಿರುತ್ತವೆ, ಆದರೆ ನೀವು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಬೇಕೆಂದು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.


ಅವರು ಸೋಮವಾರ ಆಳ್ವಾಸ್ ಕಾಲೇಜಿನ ರೆಡ್ ಕ್ರಾಸ್ ಘಟಕ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಾದಕದ್ರವ್ಯ ಸೇವನೆ ವಿರೋಧಿ ದಿನದ ಅಂಗವಾಗಿ ನಡೆದ ಜಾಗ್ರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಮೇಲೆ ಅಪಾರ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.ಆದರೆ ಯುವಜನತೆ ಅಮಲು ಪದಾರ್ಥಗಳಿಗೆ ಆಕರ್ಷಣೆ ಆಗುವಷ್ಟು ವೇಗವಾಗಿ, ಒಳ್ಳೆಯ ವಿಚಾರಕ್ಕೆ ಆಕರ್ಷಣೆಯಾಗುವುದಿಲ್ಲ. ಈ ದುಶ್ಚಟದಿಂದ ಅನೇಕ ಮಕ್ಕಳು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿರುವುದು ನಾವು ಒಳ್ಳೆಯ ಗುಣ ನಡತೆಯನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ 10 ಬಾರಿ ಯೋಚಿಸಿ ಸರಿ ತಪ್ಪುಗಳನ್ನು ಗಮನದಲ್ಲಿಟ್ಟು ಮುನ್ನಡೆಯಬೇಕೆಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ಮಾದಕ ದ್ರವ್ಯ ಸೇವನೆಯು ಆರೋಗ್ಯಕ್ಕೆ ಮಾತ್ರವಲ್ಲ ಸಮಾಜಕ್ಕೂ ಮಾರಕ, ಈ ಕುರಿತು ಯುವಜನತೆ ಎಚ್ಚರವಹಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.


ಆಳ್ವಾಸ್ ಕಾಲೇಜ್ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಭಾರತದಂತಹ ಅಭಿವೃದ್ಧಿಶೀಲ ದೇಶಕ್ಕೆ ಅಮಲು ಪದಾರ್ಥವು ತೀವ್ರ ಅಪಾಯಕಾರಿ. ಇದು ವ್ಯಕ್ತಿಯ ಮಾನಸಿಕ ನೆಮ್ಮದಿಯ ಜೊತೆಗೆ ಮನೆ ಹಾಗೂ ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂದರು.


ಬೆಂಕಿರಹಿತ ಅಡುಗೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ, ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ನಾಯಕರನ್ನು ಸನ್ಮಾನಿಸಲಾಯಿತು. ಆಪ್ತ ಸಮಾಲೋಚಕ ರೋಹಿತ್ ಕೆ ಬಂಟ್ವಾಳ ಮಂಗಳೂರಿನ ಫಾದರ್ಸ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಪೊರೆನಿಕ್ಸ್ ಮೆಡಿಸನ್, ಟೆಕ್ನಾಲಜಿ ಡಾ. ಹರೀಶ್ ಗೌಡ ಮಾದಕ ವಸ್ತು ಸೇವನೆ ಮತ್ತು ಅದರಿಂದ ಆಗುವ ದುಷ್ಟರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು. ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಹಾಗೂ ಯೂತ್ ರೆಡ್ ಕ್ರಾಸ್ ಸಂಯೋಜಕ ಸುಹನ್ ಶೆಟ್ಟಿ ಹಾಜರಿದ್ದರು. ವಿದ್ಯಾರ್ಥಿಗಳಾದ ವೈಷ್ಣವಿ ವಿ ಶೇಟ್ ನಿರೂಪಿಸಿ ಜೋಯ್ ವಿಲ್ಸನ್ ಸ್ವಾಗತಿಸಿ, ಸುಪ್ರಿತಾ ವಂದಿಸಿದರು.

Leave a Reply

Your email address will not be published. Required fields are marked *