Share this news

ಮೂಡಬಿದಿರೆ :60ನೇ ವರ್ಷದ ಮೂಡುಬಿದಿರೆ ಗಣೇಶೋತ್ಸವ, ವಜ್ರಮಹೋತ್ಸವದ ಪ್ರಯುಕ್ತ “ನೇತಾಜಿ ಬ್ರಿಗೇಡ್ (ರಿ.)ಮೂಡುಬಿದಿರೆ” ವತಿಯಿಂದ “ದಿ. ಜಿ.ಕೆ ಗಣೇಶ್ ಕಾಮತ್” ರವರ ಸವಿನೆನಪಿನೊಂದಿಗೆ 3ನೇ ವರ್ಷದ “ಮಜ್ಜಿಗೆ ಸೇವೆ” ಕಾರ್ಯಕ್ರಮ ನಡೆಯಿತು.

ಈ ಬಾರಿ 15,000 ಕ್ಕೂ ಅಧಿಕ ಮಂದಿಗೆ ಮಜ್ಜಿಗೆಯನ್ನು ಪೇಪರ್ ಗ್ಲಾಸ್ ಬಳಸದೆ ಸ್ಟೀಲ್ ಲೋಟದಲ್ಲಿ ಹಂಚಲಾಯಿತು.
ಈ ಕಾರ್ಯಕ್ಕೆ ಕೈಜೋಡಿಸಿರುವ KMF ಅಧ್ಯಕ್ಷರಾದ ಸುಚರಿತ ಶೆಟ್ಟಿ , ಚಪ್ಪರ ಹಾಗೂ ಬೇಕಾಗಿರುವ ಪರಿಕರದ ವ್ಯವಸ್ಥೆ ನೀಡಿರುವ G. K ಡೆಕಾರೇಟರ್ಸ್, ನೀರಿನ ವ್ಯವಸ್ಥೆ ಯನ್ನು ನೀಡಿರುವ ಗಿರೀಶ್ (ಗಿರಿ ಕನ್ ಟ್ರಕ್ಷನ್), ಸ್ಟೀಲ್ ಲೋಟ ನೀಡಿರುವ ಕಲ್ಪವೃಕ್ಷ ಪಾತ್ರೆಗಳ ಬಂಡಾರ ಪ್ರಮುಖರಾದ ಶ್ರೀಮತಿ ಸಂಧ್ಯಾ ವಾಹನದ ವ್ಯವಸ್ಥೆ ನೀಡಿರುವ ಸುನಿಲ್ ಎಂ.ಎಸ್ ಗಾಂಧಿನಗರ , ಅಲಂಕಾರದ ವ್ಯವಸ್ಥೆ ಮಾಡಿರುವ ಕುಮಾರ್ ಮಾಸ್ತಿಕಟ್ಟೆ, ಸ್ಥಳಾವಕಾಶ ನೀಡಿರುವ ಪುರಸಭೆಗೆ, ಸಹಕರಿಸಿರುವ ಕೊಡುಗೈ ಧಾನಿಗಳಿಗೆ, ಬಂಧು ಮಿತ್ರರಿಗೆ ಹಾಗೂ ಹಗಲು ಇರುಳು ಶ್ರಮಿಸಿರುವ ನೆಚ್ಚಿನ ಪಧಾದಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ ನೇತಾಜಿ ಬ್ರಿಗೇಡ್ ನ ಅಧ್ಯಕ್ಷ ರಾಹುಲ್ ಹಾಗೂ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

 

 

 

 

 

Leave a Reply

Your email address will not be published. Required fields are marked *