ನವದೆಹಲಿ : ಮಾರ್ಚ್ 22 ಯುಗಾದಿ ಹಬ್ಬದಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮಾರ್ಚ್ 22 ರ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಕಾಂಗ್ರೆಸ್ ಚುನಾವಣೆಯ ಸಮಿತಿ ಸಭೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಯುಗಾದಿ ಹಬ್ಬದ ದಿನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, 125 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ.ನಿನ್ನೆ ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ 125 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. 71 ಮಂದಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಯುಗಾದಿ ಹಬ್ಬದ ನಂತರ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ರಾಜ್ಯ ಘಟಕದ ನಾಯಕರ ಸಲಹೆ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.
ಹೀಗಿದೆ 80 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಮೊದಲ ಪಟ್ಟಿ
- ಚಿಕ್ಕೋಡಿ – ಗಣೇಶ ಹುಕ್ಕೇರಿ
- ಯಮಕನಮರಡಿ – ಸತೀಶ್ ಜಾರಕಿಹೊಳಿ
- ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್
- ಖಾನಾಪುರ – ಅಂಜಲಿ ನಿಂಬಾಳ್ಕರ್
- ಬೈಲಹೊಂಗಲ : ಮಹಾಂತೇಶ
- ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ
- ಬಬಲೇಶ್ವರ : ಎಂ. ಬಿ. ಪಾಟೀಲ
- ಬಸವನಬಾಗೇವಾಡಿ : ಶಿವಾನಂದ ಪಾಟೀಲ್
- ಇಂಡಿ : ಯಶವಂತಗೌಡ ಪಾಟೀಲ
- ಅಫಜಲಪುರ : ಎಂ. ವೈ. ಪಾಟೀಲ
- ಅಳಂದ : ಬಿ. ಆರ್. ಪಾಟೀಲ
- ಜೇವರ್ಗಿ : ಅಜಯ್ ಸಿಂಗ್
- ಚಿತ್ತಾಪುರ : ಪ್ರಿಯಾಂಕ ಖರ್ಗೆ
- ಷಹಾಪುರ : ಶರಣಪ್ಪ ದರ್ಶನಾಪುರ
- ಹುಮ್ನಾಬಾದ್ : ರಾಜಶೇಖರ ಪಾಟೀಲ
- ಬಾಲ್ಕಿ : ಈಶ್ವರ ಖಂಡ್ರೆ
- ಬೀದರ್ : ರಹೀಂಖಾನ್
- ಮಸ್ಕಿ : ಬಸವನಗೌಡ ತುರ್ವಿಹಾಳ
- ಕುಷ್ಟಗಿ : ಅಮರೇಗೌಡ ಬಯ್ಯಾಪುರ
- ಯಲಬುರ್ಗ : ಬಸವರಾಜ ರಾಯರೆಡ್ಡಿ
- ಕೊಪ್ಪಳ : ರಾಘವೇಂದ್ರ ಹಿಟ್ನಾಳ
- ಗಂಗಾವತಿ : ಇಕ್ಬಾಲ್ ಅನ್ಸಾರಿ
- ಕನಕಗಿರಿ : ಶಿವರಾಜ ತಂಗಡಗಿ
- ಗದಗ : ಹೆಚ್. ಕೆ. ಪಾಟೀಲ
- ರೋಣ : ಜೆ. ಎಸ್. ಪಾಟೀಲ
- ಕಲಘಟಗಿ ಸಂತೋಷ್ ಲಾಡ್
- ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ
- ಹಾನಗಲ್ : ಶ್ರೀನಾಸ್ ಮಾನೆ
- ಬ್ಯಾಡಗಿ : ಬಸವರಾಜ ಶಿವಣ್ಣನವರ
- ಹಿರೇಕೆರೂರ : ಯು. ಬಿ. ಬಣಕಾರ
- ಹೂವಿನ ಹಡಗಲಿ : ಪರಮೇಶ್ವರನಾಯ್ಕ
- ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ
- ಕಂಪ್ಲಿ : ಗಣೇಶ್
- ಬಳ್ಳಾರಿ ಗ್ರಾಮೀಣ : ನಾಗೇಂದ್ರ
- ಚಿತ್ರದುರ್ಗ : ಕೆ ಸಿ ವೀರೇಂದ್ರ
- ಮೊಳಕಾಲ್ಮೂರು : ಯೋಗೀಶ್ ಬಾಬು
- ಚಳ್ಳಕೆರೆ : ರಘುಮೂರ್ತಿ
- ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ
- ದಾವಣಗೆರೆ ಉತ್ತರ : ಎಸ್. ಎಸ್. ಮಲ್ಲಿಕಾರ್ಜುನ
- ಭದ್ರಾವತಿ : ಸಂಗಮೇಶ್
- ಸೊರಬ : ಮಧು ಬಂಗಾರಪ್ಪ
- ಶೃಂಗೇರಿ : ರಾಜೇಗೌಡ
- ಕುಣಿಗಲ್ : ರಂಗನಾಥ್
- ಕೊರಟಗೆರೆ : ಡಾ. ಪರಮೇಶ್ವರ
- ಗೌರಿಬಿದನೂರು : ಶಿವಶಂಕರರೆಡ್ಡಿ
- ಬಾಗೇಪಲ್ಲಿ : ಸುಬ್ಬಾರೆಡ್ಡಿ
- ಶಿಡ್ಲಘಟ್ಟ : ವಿ. ಮುನಿಯಪ್ಪ
- ಶ್ರೀನಿವಾಸಪುರ : ರಮೇಶ್ ಕುಮಾರ್
- ಕೆಜಿಎಫ್ : ರೂಪಕಲಾ
- ಬಂಗಾರಪೇಟೆ : ನಾರಾಯಣಸ್ವಾಮಿ
- ಮಾಲೂರು : ನಂಜೇಗೌಡ
- ಬ್ಯಾಟರಾಯನಪುರ : ಕೃಷ್ಣಭೈರೇಗೌಡ
- ಹೆಬ್ಬಾಳ : ಸುರೇಶ್ (ಭೈರತಿ)
- ಪುಲಿಕೇಶಿನಗರ : ಅಖಂಡ ಶ್ರೀನಿವಾಸ್
- ಸರ್ವಜ್ಙನಗರ : ಕೆ. ಜೆ. ಜಾರ್ಜ್
- ಶಾಂತಿನಗರ : ಹಾರೀಸ್
- ಶಿವಾಜಿನಗರ : ರಿಜ್ವಾನ್ ಹರ್ಷದ್
- ಗಾಂಧಿನಗರ : ದಿನೇಶ್ ಗುಂಡೂರಾವ್
- ವಿಜಯನಗರ : ಎಂ. ಕೃಷ್ಣಪ್ಪ
- ಗೋವಿಂದರಾಜನಗರ : ಪ್ರಿಯಾಕೃಷ್ಣ
- ಬಿಟಿಎಂ ಲೇಔಟ್ : ರಾಮಲಿಂಗಾರೆಡ್ಡಿ
- ಜಯನಗರ : ಸೌಮ್ಯರೆಡ್ಡಿ
- ಆನೇಕಲ್ : ಬಿ. ಶಿವಣ್ಣ
- ಹೊಸಕೋಟೆ : ಶರತ್ ಬಚ್ಚೇಗೌಡ
- ಕನಕಪುರ : ಡಿ. ಕೆ. ಶಿವಕುಮಾರ್
- ಮಾಗಡಿ : ಬಾಲಕೃಷ್ಣ
- ಮಂಗಳೂರು : ಯು.ಟಿ. ಖಾದರ್
- ಮೂಡುಬಿದರೆ :ಮಿಥುನ್ ರೈ
- ಬೆಳ್ತಂಗಡಿ : ವಸಂತ ಬಂಗೇರ
- ಭಂಟ್ವಾಳ : ರಮಾನಾಥ ರೈ
- ಪುತ್ತೂರು : ಶಕುಂತಲಾ ಶೆಟ್ಟಿ
- ನಾಗಮಂಗಲ : ಚಲುವರಾಯಸ್ವಾಮಿ
- ಹುಣಸೂರು : ಹೆಚ್. ಪಿ. ಮಂಜುನಾಥ
- ಪಿರಿಯಾಪಟ್ಟಣ : ವೆಂಕಟೇಶ್
- ಕೆ. ಆರ್. ನಗರ : ರವಿಶಂಕರ್
- ಹೆಚ್.ಡಿ. ಕೋಟೆ : ಅನಿಲ್
- ವರುಣ : ಡಾ. ಯತೀಂದ್ರ ಸಿದ್ದರಾಮಯ್ಯ
- ಚಾಮರಾಜನಗರ : ಪುಟ್ಟರಂಗಶೆಟ್ಟಿ
- ಹನೂರು : ನರೇಂದ್ರ
- ಕೋಲಾರ : ಸಿದ್ದರಾಮಯ್ಯ