Share this news

ನವದೆಹಲಿ : ಮಾರ್ಚ್ 22 ಯುಗಾದಿ ಹಬ್ಬದಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮಾರ್ಚ್ 22 ರ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಕಾಂಗ್ರೆಸ್ ಚುನಾವಣೆಯ ಸಮಿತಿ ಸಭೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಯುಗಾದಿ ಹಬ್ಬದ ದಿನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ನೇತೃತ್ವದಲ್ಲಿ ಕಾಂಗ್ರೆಸ್​ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, 125 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ.ನಿನ್ನೆ ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ 125 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. 71 ಮಂದಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್​ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಯುಗಾದಿ ಹಬ್ಬದ ನಂತರ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ರಾಜ್ಯ ಘಟಕದ ನಾಯಕರ ಸಲಹೆ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.

ಹೀಗಿದೆ 80 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಮೊದಲ ಪಟ್ಟಿ

  1. ಚಿಕ್ಕೋಡಿ – ಗಣೇಶ ಹುಕ್ಕೇರಿ
  2. ಯಮಕನಮರಡಿ – ಸತೀಶ್‌ ಜಾರಕಿಹೊಳಿ
  3. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್‌
  4. ಖಾನಾಪುರ – ಅಂಜಲಿ ನಿಂಬಾಳ್ಕರ್‌
  5. ಬೈಲಹೊಂಗಲ : ಮಹಾಂತೇಶ
  6. ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ
  7. ಬಬಲೇಶ್ವರ : ಎಂ. ಬಿ. ಪಾಟೀಲ
  8. ಬಸವನಬಾಗೇವಾಡಿ : ಶಿವಾನಂದ ಪಾಟೀಲ್‌
  9. ಇಂಡಿ : ಯಶವಂತಗೌಡ ಪಾಟೀಲ
  10. ಅಫಜಲಪುರ : ಎಂ. ವೈ. ಪಾಟೀಲ
  11. ಅಳಂದ : ಬಿ. ಆರ್.‌ ಪಾಟೀಲ
  12. ಜೇವರ್ಗಿ : ಅಜಯ್‌ ಸಿಂಗ್‌
  13. ಚಿತ್ತಾಪುರ : ಪ್ರಿಯಾಂಕ ಖರ್ಗೆ
  14. ಷಹಾಪುರ : ಶರಣಪ್ಪ ದರ್ಶನಾಪುರ
  15. ಹುಮ್ನಾಬಾದ್‌ : ರಾಜಶೇಖರ ಪಾಟೀಲ
  16. ಬಾಲ್ಕಿ : ಈಶ್ವರ ಖಂಡ್ರೆ
  17. ಬೀದರ್‌ : ರಹೀಂಖಾನ್‌
  18. ಮಸ್ಕಿ : ಬಸವನಗೌಡ ತುರ್ವಿಹಾಳ
  19. ಕುಷ್ಟಗಿ : ಅಮರೇಗೌಡ ಬಯ್ಯಾಪುರ
  20. ಯಲಬುರ್ಗ : ಬಸವರಾಜ ರಾಯರೆಡ್ಡಿ
  21. ಕೊಪ್ಪಳ : ರಾಘವೇಂದ್ರ ಹಿಟ್ನಾಳ
  22. ಗಂಗಾವತಿ : ಇಕ್ಬಾಲ್‌ ಅನ್ಸಾರಿ
  23. ಕನಕಗಿರಿ : ಶಿವರಾಜ ತಂಗಡಗಿ
  24. ಗದಗ : ಹೆಚ್.‌ ಕೆ. ಪಾಟೀಲ
  25. ರೋಣ : ಜೆ. ಎಸ್.‌ ಪಾಟೀಲ
  26. ಕಲಘಟಗಿ ಸಂತೋಷ್ ಲಾಡ್
  27. ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ
  28. ಹಾನಗಲ್‌ : ಶ್ರೀನಾಸ್‌ ಮಾನೆ
  29. ಬ್ಯಾಡಗಿ : ಬಸವರಾಜ ಶಿವಣ್ಣನವರ
  30. ಹಿರೇಕೆರೂರ : ಯು. ಬಿ. ಬಣಕಾರ
  31. ಹೂವಿನ ಹಡಗಲಿ : ಪರಮೇಶ್ವರನಾಯ್ಕ
  32. ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ
  33. ಕಂಪ್ಲಿ : ಗಣೇಶ್‌
  34. ಬಳ್ಳಾರಿ ಗ್ರಾಮೀಣ : ನಾಗೇಂದ್ರ
  35. ಚಿತ್ರದುರ್ಗ : ಕೆ ಸಿ ವೀರೇಂದ್ರ
  36. ಮೊಳಕಾಲ್ಮೂರು : ಯೋಗೀಶ್‌ ಬಾಬು
  37. ಚಳ್ಳಕೆರೆ : ರಘುಮೂರ್ತಿ
  38. ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ
  39. ದಾವಣಗೆರೆ ಉತ್ತರ : ಎಸ್.‌ ಎಸ್.‌ ಮಲ್ಲಿಕಾರ್ಜುನ
  40. ಭದ್ರಾವತಿ : ಸಂಗಮೇಶ್‌
  41. ಸೊರಬ : ಮಧು ಬಂಗಾರಪ್ಪ
  42. ಶೃಂಗೇರಿ : ರಾಜೇಗೌಡ
  43. ಕುಣಿಗಲ್‌ : ರಂಗನಾಥ್‌
  44. ಕೊರಟಗೆರೆ : ಡಾ. ಪರಮೇಶ್ವರ
  45. ಗೌರಿಬಿದನೂರು : ಶಿವಶಂಕರರೆಡ್ಡಿ
  46. ಬಾಗೇಪಲ್ಲಿ : ಸುಬ್ಬಾರೆಡ್ಡಿ
  47. ಶಿಡ್ಲಘಟ್ಟ : ವಿ. ಮುನಿಯಪ್ಪ
  48. ಶ್ರೀನಿವಾಸಪುರ : ರಮೇಶ್‌ ಕುಮಾರ್‌
  49. ಕೆಜಿಎಫ್‌ : ರೂಪಕಲಾ
  50. ಬಂಗಾರಪೇಟೆ : ನಾರಾಯಣಸ್ವಾಮಿ
  51. ಮಾಲೂರು : ನಂಜೇಗೌಡ
  52. ಬ್ಯಾಟರಾಯನಪುರ : ಕೃಷ್ಣಭೈರೇಗೌಡ
  53. ಹೆಬ್ಬಾಳ : ಸುರೇಶ್‌ (ಭೈರತಿ)
  54. ಪುಲಿಕೇಶಿನಗರ : ಅಖಂಡ ಶ್ರೀನಿವಾಸ್‌
  55. ಸರ್ವಜ್ಙನಗರ : ಕೆ. ಜೆ. ಜಾರ್ಜ್‌
  56. ಶಾಂತಿನಗರ : ಹಾರೀಸ್‌
  57. ಶಿವಾಜಿನಗರ : ರಿಜ್ವಾನ್‌ ಹರ್ಷದ್‌
  58. ಗಾಂಧಿನಗರ : ದಿನೇಶ್‌ ಗುಂಡೂರಾವ್‌
  59. ವಿಜಯನಗರ : ಎಂ. ಕೃಷ್ಣಪ್ಪ
  60. ಗೋವಿಂದರಾಜನಗರ : ಪ್ರಿಯಾಕೃಷ್ಣ
  61. ಬಿಟಿಎಂ ಲೇಔಟ್‌ : ರಾಮಲಿಂಗಾರೆಡ್ಡಿ
  62. ಜಯನಗರ : ಸೌಮ್ಯರೆಡ್ಡಿ
  63. ಆನೇಕಲ್‌ : ಬಿ. ಶಿವಣ್ಣ
  64. ಹೊಸಕೋಟೆ : ಶರತ್‌ ಬಚ್ಚೇಗೌಡ
  65. ಕನಕಪುರ : ಡಿ. ಕೆ. ಶಿವಕುಮಾರ್‌
  66. ಮಾಗಡಿ : ಬಾಲಕೃಷ್ಣ
  67. ಮಂಗಳೂರು : ಯು.ಟಿ. ಖಾದರ್‌
  68. ಮೂಡುಬಿದರೆ :ಮಿಥುನ್‌  ರೈ
  69. ಬೆಳ್ತಂಗಡಿ : ವಸಂತ ಬಂಗೇರ
  70. ಭಂಟ್ವಾಳ : ರಮಾನಾಥ ರೈ
  71. ಪುತ್ತೂರು : ಶಕುಂತಲಾ ಶೆಟ್ಟಿ
  72. ನಾಗಮಂಗಲ : ಚಲುವರಾಯಸ್ವಾಮಿ
  73. ಹುಣಸೂರು : ಹೆಚ್.‌ ಪಿ. ಮಂಜುನಾಥ
  74. ಪಿರಿಯಾಪಟ್ಟಣ : ವೆಂಕಟೇಶ್‌
  75. ಕೆ. ಆರ್.‌ ನಗರ : ರವಿಶಂಕರ್‌
  76. ಹೆಚ್.ಡಿ. ಕೋಟೆ : ಅನಿಲ್‌
  77. ವರುಣ : ಡಾ. ಯತೀಂದ್ರ ಸಿದ್ದರಾಮಯ್ಯ
  78. ಚಾಮರಾಜನಗರ : ಪುಟ್ಟರಂಗಶೆಟ್ಟಿ
  79. ಹನೂರು : ನರೇಂದ್ರ
  80. ಕೋಲಾರ : ಸಿದ್ದರಾಮಯ್ಯ

Leave a Reply

Your email address will not be published. Required fields are marked *