ಕಾರ್ಕಳ: ರಾಜ್ಯ ಹಾಗೂ ರಾಷ್ಟಿçÃಯಹ ಹೆದ್ದಾರಿಗಳ ವಿಸ್ತರಣೆ ಕಾಮಗಾರಿಗೆ ರಸ್ತೆಯ ಇಕ್ಕೆಲಗಳಲ್ಲಿನ ಮರಗಳನ್ನು ಕಡಿದು ಉರುಳಿಸಲಾಗುತ್ತಿದ್ದು, ಹೀಗೆ ಕಡಿದ ಮರಗಳನ್ನು ತೆರವುಗೊಳಿಸದ ಅರಣ್ಯ ಇಲಾಖೆಯ ನಿರ್ಲಕ್ಷö್ಯದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಮಟ್ಟುಗಳು ಮಣ್ಣು ಪಾಲಾಗುತ್ತಿವೆ.
ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯ ಹಾಗೂ ಹೆಬ್ರಿ ಉಡುಪಿ ರಾಷ್ಟಿçÃಯ ಹೆದ್ದಾರಿಗಳ ವಿಸ್ತರಣೆ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಇದಕ್ಕಾಗಿ ಅರಣ್ಯ ಇಲಾಖೆಯ ಅನುಮತಿ ಪಡೆದು ಸಾವಿರಾರು ಮರಗಳನ್ನು ಕಡಿಯಲಾಗಿದೆ. ಆದರೆ ಕಡಿದ ಮರಗಳ ವಿಲೇವಾರಿಯಲ್ಲಿ ಸಾಕಷ್ಟು ಗೊಂದಲವಿದ್ದು, ಕೆಲವೆಡೆ ಈ ಮರಗಳನ್ನು ನೇರವಾಗಿ ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹೇಳುತ್ತಾರೆ, ಆದರೆ ಸರ್ಕಾರಿ ಜಾಗದಲ್ಲಿನ ಮರಗಳನ್ನು ಅರಣ್ಯ ಇಲಾಖೆಯ ಡಿಪೋ ಗೆ ಸಾಗಿಸಿ ಅಲ್ಲಿಂದ ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯದಿಂದ ಕೆಲವೆಡೆ ಕಡೆದ ಮರಗಳು ರಸ್ತೆ ಬದಿಯಲ್ಲೇ ಕೊಳೆಯುತ್ತಿರುವ ಹಿನ್ನಲೆಯಲ್ಲಿ ಸರಕಾರಕ್ಕೂ ನಷ್ಟವಾಗುತ್ತಿದೆ.
ಇದಲ್ಲದೇ ಹಲವೆಡೆ ಕಡಿದ ಮರಗಳು ರಸ್ತೆಯ ಅಂಚಿನಲ್ಲೇ ಹಾಕಲಾಗಿದ್ದು ಇದರಿಂದ ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದ್ದು, ಇದು ಅಪಘಾತಗಳಿಗೂ ಎಡೆ ಮಾಡಿಕೊಡುತ್ತಿವೆ ಪ್ರಮುಖವಾಗಿ ರಾತ್ರಿವೇಳೆ ಸಂಚರಿಸುವ ವಾಹನ ಸವಾರರ ಪ್ರಾಣಕ್ಕೂ ಕಂಟಕ ಎದುರಾಗುವ ಅಪಾಯವಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಇಂತಹ ಮರಗಳ ದಿಮ್ಮಿಗಳನ್ನು ವಿಲೇವಾರಿ ಮಾಡಬೇಕಿದೆ.