Share this news

ಬೆಂಗಳೂರು : ಗೋಹತ್ಯೆ ನಿಷೇಧದಿಂದ ಹಾಲು ಉತ್ಪಾದನೆ ಕುಂಠಿತವಾಗಿದೆ ಹೀಗಾಗಿ ಗೋಹತ್ಯೆ ತಡೆ ಕಾಯ್ದೆ ವಾಪಾಸ್‌ ಪಡೆಯಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ   ಆಗ್ರಹಿಸಿದ್ದಾರೆ. 

ವಿಧಾನಸಭೆಯಲ್ಲಿ  ಮಾತನಾಡಿದ ಸಿದ್ದರಾಮಯ್ಯ ,  ಅನುಪಯುಕ್ತ ರಾಸುಗಳನ್ನು ಮೊದಲೆಲ್ಲಾ ಮಾರಾಟ ಮಾಡುತ್ತಿದ್ದರು. ಈಗ ಅಂತಹ ಸನ್ನಿವೇಶ  ಇಲ್ಲ, ಗೋಶಾಲೆಗೆ ಮಾರಬೇಕಾಗಿದೆ. ಗೋಶಾಲೆಗಳು ಸರಿಯಾಗಿ ನಡೆಯುತ್ತಿಲ್ಲ.

ಗೋಹತ್ಯೆ ನಿಷೇಧದಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ.  ನಿತ್ಯ 94 ಲಕ್ಷ ಲೀಟರ್‌ ಹಾಲು ಉತ್ಪಾದಿಸಲಾಗುತ್ತಿತ್ತು. ಈಗ 76 ಲಕ್ಷಲೀಟರ್‌ ಹಾಲು ಉತ್ಪಾದನೆ ಆಗ್ತಿದೆ. ರೈತರಿಗೆ ಇದರಿಂದ 6.66 ಲಕ್ಷ ಪ್ರತಿದಿನ ನಷ್ಟವಾಗುತ್ತಿದೆ. ಸರ್ಕಾರದ ಬೇಜವಾಬ್ದಾರಿತನ , ಉಡಾಫೆಯೇ ಇದಕ್ಕೆ ಕಾರಣ. ಹೀಗಾಗಿ ಗೋಹತ್ಯೆ ತಡೆ ಕಾಯ್ದೆ ವಾಪಾಸ್‌ ಪಡೆಯಬೇಕೆಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *