Share this news

ದಕ್ಷಿಣ ಕನ್ನಡ : ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರದ ಗುರುಂಪು ಬಳಿ ತಡೆಗೋಡೆ ನಿರ್ಮಾಣದ ಸೆಂಟ್ರಿಂಗ್​ ಕೆಲಸ ಮಾಡುತ್ತಿದ್ದ ವೇಳೆ ಬರೆ ಕುಸಿದು ಮಣಿನಡಿ ಮೂವರು ಕಾರ್ಮಿಕರು ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. 

ಇಂದು ಮಧ್ಯಾಹ್ನ ಅಬೂಬಕ್ಕರ್​ ಎಂಬುವರ ಮನೆಯಲ್ಲಿ ತಡೆಗೋಡೆ ನಿರ್ಮಾಣದ ಮಾಡುತ್ತಿದ್ದ ವೇಳೆ ದುರಂತ ಘಟನೆ ನಡೆದಿದೆ ಎಂದು ತಿಳಿಯಲಾಗಿದೆ. ತಡೆಗೋಡೆ ನಿರ್ಮಾಣದ ಮಾಡುತ್ತಿದ್ದ ಮಹಿಳೆ ಸೇರಿ  ಮೂವರು ಕಾರ್ಮಿಕರು ಧಾರವಾಡ ಮೂಲದ ನಿವಾಸಿಗಳು.  ಘಟನಾ ಸ್ಥಳಕ್ಕೆ  ಅಗ್ನಿಶಾಮಕ ದಳ ಹಾಗೂ ಸ್ಥಳಿಯರಿಂದ ಜೆಸಿಬಿ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *