ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ಆದರೆ ಬೇಸಿಗೆ ಆರಂಭಕ್ಕೆ ಮುನ್ನವೇ ವಿಪರೀತ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅದರ ಜೊತೆಗೆ ಜನರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದ್ದು ಜನ ರೋಸಿ ಹೋಗಿದ್ದಾರೆ. ಈ ನಡುವೇ ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ.
ಕಳೆದ ವಾರದಿಂದ ಬೆಂಡೆಕಾಯಿ, ಟೊಮೆಟೋ, ಕ್ಯಾರೆಟ್ ಸೇರಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ಕೊರತೆಯಾಗಿದ್ದರಿಂದ ದಿಢೀರ್ ಬೆಲೆ ಏರಿಕೆಯಾಗಿದೆ.ಒಂದು ಕೆಜಿ ಟೊಮೆಟೋ ಬೆಲೆ 30 ರಿಂದ 40 ರೂಪಾಯಿ, ಒಂದು ಕೆಜಿ ಬಿನ್ಸ್ ಬೆಲೆ 40ರಿಂದ 70 ರೂಪಾಯಿ, ಒಂದು ಕೆಜಿ ಕ್ಯಾರೆಟ್ ಬೆಲೆ 20ರಿಂದ 50 ರೂಪಾಯಿ ಆಗಿದೆ.
ಹಾಗೆಯೇ ಹಣ್ಣುಗಳಾದ ಒಂದು ಕೆಜಿ ಸೇಬು ಹಣ್ಣಿನ ಬೆಲೆ 170 ರಿಂದ 200 ರೂ, ಒಂದು ಕೆಜಿ ಬ್ಲ್ಯಾಕ್ ದ್ರಾಕ್ಷಿ 150 ರಿಂದ 220 ರೂ., ಒಂದು ಕೆಜಿ ದಾಳಿಂಬೆ 120 ರಿಂದ 190 ರೂ.ವರೆಗೆ ಏರಿಕೆಯಾಗಿದೆ.ಬೇಸಿಗೆ ಆರಂಭವಾಗುತ್ತಿದ್ದAತೆ ತರಕಾರಿ ಹಾಗೂ ಹಣ್ಣುಗಳ ಬೆಲೆ ಗಗನನಕ್ಕೇರಿದೆ. ಇನ್ನು ಏಪ್ರಿಲ್-ಮೇ ವೇಳೆಗೆ ತರಕಾರಿ, ಹಣ್ಣುಗಳ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.