ಕಾರ್ಕಳ: ಕಳೆದ 5 ವರ್ಷಗಳಿಂದ ಯಾವುದೇ ಪ್ರತಿಫಲ ಬಯಸದೇ ಪ್ರತೀ ಭಾನುವಾರ ಸ್ವಚ್ಚತಾ ಕಾರ್ಯವನ್ನು ನಡೆಸಿಕೊಂಡು ಬಂದಿರುವ ಸ್ವಚ್ಛ ಬ್ರಿಗೇಡ್ ಕಾರ್ಕಳ ಇದೀಗ ಪರಿಸರ ಸಂರಕ್ಷಣೆ ಸಲುವಾಗಿ 7 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡುವ ಗುರಿಯನ್ನು ಇರಿಸಿಕೊಂಡಿದೆ. ವೃಕ್ಷರೋಹಣ 2024 ಎನ್ನುವ ಯೋಜನೆಯ ಮೂಲಕ 7 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆಯಿತು. ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ-ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶೆ ಕು. ಕೋಮಲಾ ಆರ್.ಸಿ ಅವರು ಗಿಡ ನೆಡುವ ಮೂಲಕ ವೃಕ್ಷರೋಹಣ-2024 ಅಭಿಯಾನವನ್ನು ಉದ್ಘಾಟಿಸಿದರು.
ಕಾರ್ಕಳದ ರಾಘವೇಂದ್ರ ಮಠದ ಬಳಿ ಸ್ವಚ್ಛ ಕಾರ್ಕಳ ಬ್ರಿಗೇಡ್ ರಚಿಸಿರುವ ಫ್ರೀಡಂ ಟ್ರೀ ಪಾರ್ಕ್ನಲ್ಲಿ ವಿವಿಧ ತಳಿಯ ಸುಮಾರು 30 ಸಸಿಗಳನ್ನು ನೆಟ್ಟು ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಕಳದ ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಅಬು ತಾಹೀರ್ ಅವರು ಭಾಗವಹಿಸಿ ಮಾತನಾಡಿ, ಸ್ವಚ್ಛ ಕಾರ್ಕಳ ಬ್ರಿಗೇಡಿನ ಕಾರ್ಯವೈಖರಿಯನ್ನು ಮೆಚ್ಚಿ ತಂಡದ ಸದಸ್ಯರ ನಿಸ್ವಾರ್ಥ ಸೇವೆ ಎಲ್ಲರಿಗೂ ಆದರ್ಶ ಎಂದು ಹೇಳಿದರು.
ಈ ಸಂದರ್ಬದಲ್ಲಿ ನಿಟ್ಟೆ ಕಾಲೇಜ್ ಎಂಸಿಎ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಜಿಲ್ಲಾ ಪರಿಯವರ್ಣ ಗಥಿ ವಿಧಿಯ ಸಂಯೋಜಕರಾದ ಡಾ. ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಪುರಸಭೆಯ ಪರಿಸರಾಧಿಕಾರಿ ಜ್ಯೋತಿಶ್ರೀಯವರು ಉಪಸ್ಥಿತರಿದ್ದರು.
ಕಾರ್ಕಳ-ಹೆಬ್ರಿ ತಾಲೂಕಿನಲ್ಲಿ ವೃಕ್ಷರೋಹಣ:24 ಅಭಿಯಾನದಲ್ಲಿ ಭಾಗವಹಿಸಲು ಆಸಕ್ತಿ ಇದ್ದವರು ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡವನ್ನು ಸಂಪರ್ಕಿಸಬಹುದು.
ಮೊಬೈಲ್: 77600 50116










