ಉಡುಪಿ: ಆಡಳಿತ ಮಂಡಳಿಯಲ್ಲಿ ಅಧ್ಯಕ್ಷನಾಗಿದ್ದ ವ್ಯಕ್ತಿ ಆಡಳಿತ ಮಂಡಳಿಯನ್ನು ಬದಲಾಯಿಸಿದ ಬಳಿಕ ತನ್ನ ಅಧಿಕಾರ ಸ್ಥಾಪಿಸಲು ಪ್ರತ್ಯೇಕ ಟ್ರಸ್ಟ್ ರಚಿಸಿ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿ ದೈವದ ವಿರುದ್ಧವೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದ ಮರುದಿನವೇ ಅಧ್ಯಕ್ಷನಾಗಿ ನೇಮಕವಾಗಿದ್ದಾತ ಕುಸಿದುಬಿದ್ದು ಅಸುನೀಗಿದ ಅಚ್ಚರಿಯ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರೆ ಪಡುಹಿತ್ಲು ಜಾರಂದಾಯ ದೈವಸ್ಥಾನದ ಬಳಿಯಲ್ಲಿ ಸಂಭವಿಸಿದೆ.
ಪಡುಬಿದ್ರೆಯ ಪಡುಹಿತ್ಲು ಜಾರಂದಾಯ ದೈವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದ್ದು,ಇದರ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಎಂಬವರು ಅಧ್ಯಕ್ಷರಾಗಿದ್ದರು, ಆದರೆ ಅವಧಿ ಮುಗಿದ ಬಳಿಕ ಅಧ್ಯಕ್ಷರಾಗಿದ್ದ ಪ್ರಕಾಶ್ ಶೆಟ್ಟಿ ಹಾಗೂ ಸದಸ್ಯರ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿತ್ತು. ಆದರೆ ಅಧಿಕಾರದ ವ್ಯಾಮೋಹದಿಂದ ಕುರುಡನಾಗಿದ್ದ ಪ್ರಕಾಶ್ ಶೆಟ್ಟಿ, ಸಮಿತಿಯ ಸದಸ್ಯ ಜಯ ಪೂಜಾರಿಯ ಜತೆ ಸೇರಿ ಪರ್ಯಾಯ ಸಮಿತಿ ರಚನೆಗೆ ಪ್ಲಾನ್ ಮಾಡಿಕೊಂಡು, ಊರ ಭಕ್ತಾಧಿಗಳ ಸಮ್ಮುಖದಲ್ಲಿ ಆಯ್ಕೆಯಾಗಿದ್ದ ಆಡಳಿತ ಸಮಿತಿಯ ಬದಲಿಗೆ ಪರ್ಯಾಯ ಸಮಿತಿ ರಚಿಸಿ ಅದಕ್ಕೆ ಜಯ ಪೂಜಾರಿಯನ್ನು ಅಧ್ಯಕ್ಷನನ್ನಾಗಿ ನೇಮಿಸಿದ್ದರು.
ಇತ್ತ ಹಾಲಿ ಮಂಡಳಿ ಹಾಗೂ ಗ್ರಾಮಸ್ಥರು ಜನವರಿ 7ರಂದು ನಡೆಯಬೇಕಿದ್ದ ವರ್ಷಾವಧಿ ನೇಮೋತ್ಸವಕ್ಕೆ ದಿನ ನಿಗದಿ ಮಾಡಿದ್ದರು, ಆದರೆ ಪ್ರಕಾಶ್ ಶೆಟ್ಟಿ ಹಾಗೂ ಜಯ ಪೂಜಾರಿ ದೈವಸ್ಥಾನದ ಆಡಳಿತ ಸಮಿತಿ ಪುನಾರಚನೆಯ ವಿವಾದ ಮುಂದಿಟ್ಟುಕೊAಡು ಜನವರಿ 7ರಂದು ನಡೆಯಬೇಕಿದ್ದ ವರ್ಷಾವಧಿ ದೈವ ನೇಮೋತ್ಸವ ನಡೆಸದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ.ಕೊನೆಗೂ ಪ್ರಕಾಶ್ ಶಟ್ಟಿ ಹಾಗೂ ಜಯ ಪೂಜಾರಿಯವರು ದೈವಸ್ಥಾನದ ಆಡಳಿತ ಸಮಿತಿ ಹಾಗೂ ಊರಿನ ಭಕ್ತಾಧಿಗಳ ತೀರ್ಮಾನದಂತೆ ನಿಗದಿಯಾಗಿದ್ದ ವರ್ಷಾವಧಿ ದೈವ ನೇಮೋತ್ಸವಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗುತ್ತಾರೆ.
ಜಿಲ್ಲಾ ನ್ಯಾಯಾಲಯವು ಡಿ 23ರಂದು ವರ್ಷಾವಧಿ ನೇಮೋತ್ಸವಕ್ಕೆ ತಡೆಯಾಜ್ಞೆ ನೀಡಿ ಆದೇಶ ನೀಡಿತ್ತು. ಆದರೆ ಜಾರಂದಾಯ ದೈವ ನೇಮೋತ್ಸವಕ್ಕೆ ತಡೆಯಾಜ್ಞೆ ನೀಡಿದ ಮರುದಿನವೇ ಅಂದರೆ 24ರಂದು ಜಯ ಪೂಜಾರಿಯವರು ದೈವದ ತಂಬಿಲ ಸೇವೆಯ ಸಂದರ್ಭದಲ್ಲಿ ಕುಸಿದುಬಿದ್ದು ಸಾವನ್ನಪ್ಪುತ್ತಾರೆ.ಈ ಘಟನೆಯನ್ನು ದೈವದ ಕಾರಣೀಕ ಎಂದೇ ವಿಶ್ಲೇಷಿಸಲಾಗಿದೆ. ಸತ್ಯ,ಧರ್ಮಕ್ಕೆ ವಿರುದ್ದವಾಗಿ ನಡೆದರೆ, ತೀರ್ಮಾನ ಕೋರ್ಟಿನಲ್ಲಿ ಅಲ್ಲ ನನ್ನ ಮೆಟ್ಟಿನಲ್ಲೇ ನಾನು ತೀರ್ಮಾನ ಮಾಡುತ್ತೇನೆ ಎಂದು ಕಾಂತಾರ ಚಿತ್ರದಲ್ಲಿ ದೈವ ನುಡಿ ಕೊಟ್ಟಿರುವ ಚಿತ್ರಣವನ್ನೇ ನೆನಪಿಸುವಂತಿದೆ.
ಆದರೆ ಜಯ ಪೂಜಾರಿ ಅಚ್ಚರಿಯ ರೀತಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಸಮಿತಿಯು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತೆರವುಗೊಳಿಸಿತ್ತು. ಆದರೆ ಈ ಎಲ್ಲಾ ಘಟನೆಗಳಿಂದ ಪಾಠ ಕಲಿಯಬೇಕಿದ್ದ ಪ್ರಕಾಶ್ ಶೆಟ್ಟಿ ಸಮಿತಿಯ ಸದಸ್ಯರಿಗೆ ಹಾಗೂ ದೈವ ನರ್ತಕ ಭಾಸ್ಕರ ಬಂಗೇರ ಎಂಬವರಿಗೆ ದೈವ ಕೋಲದಲ್ಲಿ ನನ್ನ ಪರವಾಗಿ ನುಡಿ ಕೊಡಬೇಕು ಎಂದು ಬೆದರಿಕೆಯೊಡಿದ್ದಾರೆ ಎಂದು ಭಾಸ್ಕರ ಬಂಗೇರ ಆರೋಪಿಸಿದ್ದಾರೆ.
ಆದರೆ ಜಯ ಪೂಜಾರಿಯವರ ಉತ್ತರಕ್ರಿಯೆಯು ಜನವರಿ 7ರಂದು(ಇAದು) ನಡೆಯಲಿರುವ ಕಾರಣದಿಂದ ಸಮಿತಿ ಹಾಗೂ ಊರವರ ತೀರ್ಮಾನದಂತೆ ಇಂದು ನಿಗದಿಯಾಗಿದ್ದ ನೇಮೋತ್ಸವವನ್ನು ಮುಂದೂಡಲಾಗಿದೆ. ಆದರೆ ಹಠ ಬಿಡದ ಪ್ರಕಾಶ್ ಶೆಟ್ಟಿ ಬಣದವರು ಇಂದೇ ನೇಮೋತ್ಸವ ನಡೆಸಲು ತೀರ್ಮಾನಿಸಿದ್ದಾರೆ. ಆದರೆ ಇವರ ವರ್ತನೆಯ ವಿರುದ್ಧ ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೈವಕ್ಕಿಂತ ತಾನು ಮಿಗಿಲು ಎಂಬ ಸ್ವಾರ್ಥ ಚಿಂತನೆಯಿAದ ಸತ್ಯ,ಧರ್ಮ ದೈವದ ಕಾರಣೀಕ ಶಕ್ತಿಗೆ ಸೆಡ್ಡು ಹೊಡೆದು ನ್ಯಾಯಾಲಯದ ಮೆಟ್ಟಿಲು ತುಳಿಯಲು ಮುಂದಾದ ವ್ಯಕ್ತಿಗೆ ದೈವದ ತನ್ನ ಮೆಟ್ಟಿನಲ್ಲೇ ತೀರ್ಪು ಕೊಟ್ಟಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.