Share this news

ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು ಈಗಾಗಲೇ ಚುನಾವಣೆ ಅಖಾಡ ರಂಗೇರಿದೆ. ಇದರ ಜೊತೆಗೆ ಮತದಾನ ಕೇಂದ್ರಗಳು ಕೂಡ ರೋಚಕವಾಗಿ ಕಾಣಿಸಲಿದ್ದು ಬಣ್ಣಗಳು ಮತದಾರರನ್ನು ಸ್ವಾಗತಿಸಲಿವೆ. ಇಂತಹ ನೂತನ ಯೋಜನೆಯೊಂದನ್ನು ಉಡುಪಿಯಲ್ಲಿ ಪ್ರಯೋಗಿಸಲಾಗುತ್ತಿದ್ದು, ಮತದಾರರಿಗಾಗಿ ಮತಗಟ್ಟೆಗಳ ಅಂದವನ್ನು ಹೆಚ್ಚಿಸಲು ಮತ ಕೇಂದ್ರಗಳಲ್ಲಿ ಕಲಾತ್ಮಕ ಚಿತ್ರ ಮೂಡಿಸಲು ಸ್ವೀಪ್ ಸಮಿತಿ ಮುಂದಾಗಿದೆ.

ಉಡುಪಿಯ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಸ್ವೀಪ್) ಸಮಿತಿಯು ಒಂದು ಹೆಜ್ಜೆ ಮುಂದಿಟ್ಟಿದ್ದು ಸಾರ್ವಜನಿಕರಿಗೆ ಮತ ಕೇಂದ್ರಗಳಿಗೆ ಬಣ್ಣ ಹಚ್ಚುವ, ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ. ಪ್ರಥಮ ಬಹುಮಾನ -8,000 ರೂ. ದ್ವಿತಿಯ ಬಹುಮಾನ 6,000 ರೂ. ಮತ್ತು ತೃತೀಯ ಬಹುಮಾನ 4,000 ರೂ.ಗಳನ್ನು ನಿಗದಿಪಡಿಸಲಾಗಿದೆ. ಹಾಗೂ ತಲಾ 2,000 ರೂ.ಗಳ ಎರಡು ಸಮಾಧಾನಕರ ಬಹುಮಾನಗಳನ್ನು ಸಹ ಇಡಲಾಗಿದೆ. ಮಾರ್ಚ್ 24 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಗೋಡೆ-ಚಿತ್ರಕಲೆ ಸ್ಪರ್ಧೆ ನಡೆಯಲಿದೆ.

ಗೋಡೆ ಚಿತ್ರ ಸ್ಪರ್ಧೆಗೆ ನೊಂದಣಿ ಮಾಡುವುದು ಹೇಗೆ?:
ಗೂಗಲ್ ಫಾರ್ಮ್ಗಳ ಮೂಲಕ ನೋಂದಣಿಯನ್ನು ಮಾಡಬಹುದು. ಇತ್ತೀಚೆಗಷ್ಟೇ ಹನುಮಂತನಗರ ಶಾಲೆಯಲ್ಲಿ 30ಕ್ಕೂ ಹೆಚ್ಚು ಶಿಕ್ಷಕರು ಐದು ಮತಗಟ್ಟೆಗಳಿಗೆ ಬಣ್ಣ ಬಳಿದು ಸಂಚಲನ ಮೂಡಿಸಿದ್ದರು. ಇನ್ನು ಸ್ಪರ್ಧೆಯ ನಿಯಮಗಳನ್ನು ವಿವರಿಸಿದ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹೆಚ್, ಸ್ವಿಪ್ ಸಮಿತಿಯಿಂದ ಬಣ್ಣ ನೀಡಲಾಗುವುದು, ಭಾಗವಹಿಸುವವರು ಉಪಕರಣಗಳನ್ನು ತಾವೇ ತರಬೇಕಾಗುತ್ತೆ. ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇನ್ನು ಈ ಸ್ಪರ್ಧಿಯಲ್ಲಿ ಇಬ್ಬರು ಸದಸ್ಯರ ತಂಡಗಳಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸ್ಪರ್ಧೆಯ ಮೂಲ ವಿಷಯವೆಂದರೆ ಯಕ್ಷಗಾನ, ಕಂಬಳ ಮತ್ತು ಪ್ರಸಿದ್ಧ ಉಡುಪಿ ಕೈಮಗ್ಗ ಸೀರೆಗಳು, ಜೊತೆಗೆ, ಕಲಾವಿದರು ಕುಂಬಾರಿಕೆ, ಬುಟ್ಟಿ ನೇಯ್ಗೆ ಮತ್ತು ಇತರ ವಿಷಯಗಳ ಜೊತೆಗೆ ಜಾನಪದ ಶೈಲಿಯನ್ನು ಎತ್ತಿ ತೋರಿಸುವ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವAತಿರಬೇಕು. ಆದರೆ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಿಡಿಸಲು ಅನುಮತಿ ಇಲ್ಲ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದು ಮತ್ತು ಸೃಜನಶೀಲತೆಯನ್ನು ಎತ್ತಿ ಹಿಡಿಯುವುದು ಇದರ ಉದ್ದೇಶವಾಗಿದೆ. 1,111 ಮತಗಟ್ಟೆಗಳಿಗೆ ಹಂತ ಹಂತವಾಗಿ ಬಣ್ಣ ಬಳಿಯುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ನಗದು ಬಹುಮಾನದ ಜೊತೆಗೆ ಪ್ರಶಂಸಾ ಪತ್ರವೂ ಇರುತ್ತದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ 9880505271 ಅಥವಾ 9481971071 ಗೆ ಕರೆ ಮಾಡಬಹುದು.

Leave a Reply

Your email address will not be published. Required fields are marked *