ಕಾರ್ಕಳ: ತುಳುನಾಡಿನ ಸೃಷ್ಟಿಗೆ ಕಾರಣಕರ್ತ ಎಂದು ನಾವೆಲ್ಲರೂ ಧಾರ್ಮಿಕ ನಂಬಿಕೆ ಇರಿಸಿ ಕೊಂಡಿದ್ದ ಪರಶುರಾಮರ ಚರಿತ್ರೆಗೆ ಭೈರವ ಅರಸನ ನಾಡಿನಲ್ಲಿ ಮಸಿ ಬಳಿಯಲು ಹೊರಟಿರುವ ಕಾರ್ಕಳದ ರಾಜಕೀಯ ನಾಯಕರ ರಾಜಕೀಯ ಶೈಲಿಯು ಪರಶುರಾಮನಿಗೆ ಮಾಡಿದ ಅವಮಾನ ಮಾತ್ರವಲ್ಲದೇ ಧರ್ಮವನ್ನೇ ಅಧಪತನ ಮಾಡಲು ಹೊರಟಿರುವುದು ಖಂಡನೀಯ ಎಂದು ಬಿಜೆಪಿ ಉಚ್ಚಾಟಿತ ಕಾರ್ಯಕರ್ಯ ಹಾಗೂ ನಿಟ್ಟೆ ಪಂಚಾಯತ್ ಸದಸ್ಯ ಸುಭಾಸ್ ಚಂದ್ರ ಹೆಗ್ಡೆ ಹೇಳಿದ್ದಾರೆ.
ಕಾರ್ಕಳದಲ್ಲಿ ಪರಶುರಾಮ ಮೂರ್ತಿಯ ನಿರ್ಮಾಣದ ಸಂದರ್ಭದಲ್ಲಿ ಎಲ್ಲರೂ ಸಂತಸ ಪಟ್ಟಿದ್ದರು. ಧರ್ಮದ ವಿಚಾರ ಬಂದಾಗ ಕರಾವಳಿಯಲ್ಲಿ ಎಲ್ಲಾ ಹಿಂದೂಗಳು ಕೂಡ ಒಟ್ಟಾಗುತ್ತಾರೆ.ಆದರೆ ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳನ್ನು ರಾಜಕೀಯದ ಆಟಕ್ಕೆ ಕಾರ್ಕಳ ಶಾಸಕರು ಬಳಸಿಕೊಂಡಿದ್ದಕ್ಕೆ ಬೈಲೂರಿನಲ್ಲಿ ನಿರ್ಮಾಣ ಆಗಿರುವ ಪರಶುರಾಮರ ನಕಲಿ ಮೂರ್ತಿಯೇ ಸಾಕ್ಷಿಯಾಗಿದೆ.
ಕಾರ್ಕಳಕ್ಕೆ ಬಂದ ನೈಜ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಅವರನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಭಾಷಣವೊಂದರಲ್ಲಿ ಪರಶುರಾಮ ಬೆಟ್ಟದಲ್ಲಿ ಹಾರಲು ಹೇಳಿದಾಗಲೇ ನಮಗೆಲ್ಲರಿಗೂ ಪರಶುರಾಮರ ಮೂರ್ತಿಯನ್ನು ನಕಲಿ ಮಾಡಿದ್ದಾರೆ ಎಂಬ ಸಂಶಯ ಬಂದಿತ್ತು,ಕಾರ್ಕಳ ಶಾಸಕರು ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಿ ಹಿಂದೂ ಧರ್ಮಕ್ಕೆ ಅಪಚಾರ ಮಾಡಿದ್ದಾರೆ ಎಂದು ಸುಭಾಸ್ ಚಂದ್ರ ಹೆಗ್ಡೆ ಆರೋಪಿಸಿದ್ದಾರೆ.