ಹೆಬ್ರಿ: ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ಬೈಕ್ ಸವಾರ ಜಯಕರ ತನ್ನ ಬೈಕಿನಲ್ಲಿ ಶ್ರೀನಿವಾಸ ಎಂಬವರೊಂದಿಗೆ ಬಲ್ಲಾಡಿ ಈಶ್ವರನಗರ ಕಡೆಯಿಂದ ಮುದ್ರಾಡಿ ಕಡೆಗೆ ಬರುತ್ತಿದ್ದ ವೇಳೆ ಮುದ್ರಾಡಿ ಕಡೆಯಿಂದ ಬಲ್ಲಾಡಿ ಕಡೆಗೆ ಅಭಯ ಕಚ್ಚಪ್ಪ ಎಂಬಾತ ತನ್ನ ಬೈಕಿನಲ್ಲಿ ಅತಿವೇಗವಾಗಿ ಬಂದು ನಿಯಂತ್ರಣತಪ್ಪಿ ಜಯಕರ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ.
ಈ ಅಪಘಾತದಿಂದ ಬೈಕ್ ಸವಾರರು ಗಾಯಗೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ










