Share this news

ಉಡುಪಿ: ದಕ್ಷ ಅಧಿಕಾರಿಯಾಗಿರುವ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಅವರಿಗೆ ದಿಢೀರ್ ವರ್ಗಾವಣೆ ಶಿಕ್ಷೆ ಎದುರಾಗಿದೆ. ಈ ವರ್ಗಾವಣೆ ಶಿಕ್ಷೆಯ ಹಿಂದೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕರ ಒತ್ತಡವಿದೆ ಎಂಬ ಆರೋಪ‌ ಕೇಳಿಬರುತ್ತಿದೆ.

ಮಾಜಿ ಶಾಸಕರ ಆಪ್ತನ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ಎಸಿ ರಶ್ಮಿ ಸಹಕಾರ ನೀಡದ ಹಿನ್ನೆಲೆಯಲ್ಲಿ ಅವರಿಗೆ ಈ ವರ್ಗಾವಣೆ ಶಿಕ್ಷೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಾಜಿ ಶಾಸಕನ ಆಪ್ತನ ಜಾಗದ ತಕರಾರನ್ನು ವಿಲೇವಾರಿ ಮಾಡುವಂತೆ ಕಾನೂನು ಮೀರಿ ರಶ್ಮಿ ಅವರಿಗೆ ಒತ್ತಡ ಹೇರಲಾಗಿತ್ತು. ಇದಕ್ಕೆ ಒಪ್ಪದ ಸಹಾಯಕ ಆಯುಕ್ತೆ ರಶ್ಮಿ ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡಿಕೊಡುವುದಾಗಿ ಹೇಳಿದ್ದರು. ಇದರಿಂದಾಗಿ ಮಾಜಿ ಶಾಸಕರಿಗೆ ತೀವ್ರ ಹಿನ್ನೆಡೆಯಾಗಿತ್ತು.ಇದರಿಂದ ಎಸಿ ವಿರುದ್ಧ ಆಕ್ರೋಶಗೊಂಡು ಎತ್ತಂಗಡಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. ರಶ್ಮಿ ಅವರ ದಿಟ್ಟ ನಿರ್ಧಾರ ಮತ್ತು ದಕ್ಷತೆಗೆ ಕುಂದಾಪುರದ ಜನತೆ ಶಹಭ್ಬಾಸ್ ಎಂದು ಹಾಡಿ ಹೊಗಳಿದ್ದರು. ಅಧಿಕಾರಿ ಎಂದರೆ ಪ್ರಾಮಾಣಿಕವಾಗಿ ರಶ್ಮಿ ಅವರಂತೆ ಇರಬೇಕು ಎಂದು ಪ್ರಶಂಸೆಯ ಮಾತನ್ನಾಡಿದ್ದರು. ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಇರುವ ಕಾನೂನು ಇಲ್ಲ ಎಂಬ ದಿಟ್ಟತನವನ್ನು ನೇರವಾಗಿ ಮಾಜಿ ಶಾಸಕರಿಗೆ ತೋರಿಸಿಕೊಟ್ಟಿದ್ದರು.ಇದರಿಂದ ಸಿಟ್ಟಾದ ಮಾಜಿ ಶಾಸಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೂಲಕ ಎಸಿ ರಶ್ಮಿ ಅವರನ್ನು ವರ್ಗಾವಣೆಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

                        

                          

                        

                          

 

`

Leave a Reply

Your email address will not be published. Required fields are marked *