ಕಾರ್ಕಳ : ಕಾರ್ಕಳ ಜ್ಞಾನಸುಧಾದ ಆವರಣದಲ್ಲಿರುವ ಶ್ರೀಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ, ದಶಮಾನೋತ್ಸವದ ಸಂಭ್ರಮದಲ್ಲಿರುವ ಹವ್ಯಾಸಿ ಯಕ್ಷಗಾನ ಕಲಾವಿದರ ಸಂಗಮವಾಗಿರುವ ಜ್ಞಾನಸುಧಾದ ಯಕ್ಷೋತ್ಕರ್ಷ ಬಳಗದಿಂದ, ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಳೆ ಜರುಗಿತು.
ಸ.ಪ.ಪೂ.ಕಾಲೇಜು ಬೈಲೂರಿನ ಭೌತಶಾಸ್ತç ಉಪನ್ಯಾಸಕ ಗೋಪಾಲಕೃಷ್ಣ ಗೋರೆಯವರ ನಿರ್ದೇಶನದಲ್ಲಿ ಜರುಗಿದ ಜಾಂಬವತಿ ಕಲ್ಯಾಣ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಸ,ಪ.ಪೂ.ಕಾಲೇಜು ಬೈಲೂರು ಇಲ್ಲಿನ ರಸಾಯನ ಶಾಸ್ತç ಉಪನ್ಯಾಸಕರಾದ ಸೀತಾರಾಮ್ ಭಟ್ ಬೈಲೂರು, ಮದ್ದಳೆಯಲ್ಲಿ ಯಕ್ಷೋತ್ಕರ್ಷ ದ ತರಬೇತುದಾರ, ಶ್ರೀ ಆನಂದ್ ಗುಡಿಗಾರ್ ಕೆರ್ವಾಶೆ, ಚೆಂಡೆಯಲ್ಲಿ ಶ್ರೀನಿಧಿ ಆಚಾರ್, ಚಕ್ರತಾಳದಲ್ಲಿ ಶ್ರೀ ರಂಜಿತ್ ಪಾಟ್ಕರ್ ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಶ್ರೀರಾಮನ ಪಾತ್ರದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಶ್ರೀಕೃಷ್ಣನ ಗೋಪಾಲ ಕೃಷ್ಣ ಗೋರೆ, ಬಲರಾಮನಾಗಿ ಸ.ಪ.ಪೂ.ಕಾಲೇಜಿನ ಮುನಿಯಾಲಿನ ಗಣಿತ ಉಪನ್ಯಾಸಕ ಶ್ರೀ ಅನಿಲ್ ಕುಮಾರ್, ಸತ್ರಾರ್ಜಿತನ ಪಾತ್ರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಜಾಂಬವAತನ ಪಾತ್ರದಲ್ಲಿ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಹಾಗೂ ಯಕ್ಷೋತ್ಕರ್ಷದ ನಿರ್ವಾಹಕಿ ಶ್ರೀಮತಿ ಸಂಗೀತಾ ಕುಲಾಲ್, ಜಾಂಬವತಿಯಾಗಿ ಗಣಿತ ಶಿಕ್ಷಕಿ ಕು. ಆಜ್ಞಾ ಸೋಹಂ, ನಾರದನಾಗಿ ಸಂಸ್ಥೆಯ ನಿರ್ವಹಣಾ ವಿಭಾಗದ ಶ್ರೀ ಶೇಖರ್ ಶೆಟ್ಟಿ, ಪ್ರಸೇನನ ಪಾತ್ರದಲ್ಲಿ ಗಣಿತ ಉಪನ್ಯಾಸಕ ಶ್ರೀ ಶ್ರೇಯಾನ್ ಜೈನ್ ಮಿಂಚಿದ್ದರು.