ಹೆಬ್ರಿ: ಕೇವಲ ಮೂರುವರೆ ವರ್ಷದ ಎಳೆಯ ಕಂದಮ್ಮನ ಮೇಲೆ ಭೀಕರ ಮಾರಣಾಂತಿಕ ಹಲ್ಲೆ ನಡೆಸಿದ ಘನಘೋರ ಘಟನೆ ಹೆಬ್ರಿ ತಾಲೂಕಿನ ಶೇಡಿಮನೆ ಎಂಬ ಗ್ರಾಮದಲ್ಲಿ ಸಂಭವಿಸಿದೆ. ಪ್ರಪಂಚದ ಜ್ಞಾನವೇ ಇಲ್ಲದ ಹಾಲುಗಲ್ಲದ ಹಸುಳೆಯ ಮೇಲಿನ ಈ ಭೀಕರ ಹಲ್ಲೆ ಇಡೀ ಪ್ರಜ್ಞಾವಂತ ಸಮಾಜವೇ ಬೆಚ್ಚಿಬಿದ್ದಿದೆ.
ಘಟನೆಯ ವಿವರ:
ಹೆಬ್ರಿ ತಾಲೂಕು ವ್ಯಾಪ್ತಿಯ ಶೇಡಿಮನೆ ಎಂಬಲ್ಲಿನ ನಿವಾಸಿ ಪೂರ್ಣಪ್ರಿಯಾ ಎಂಬವರು ಸೆ 12 ರಂದು ತನ್ನ ಮಗುವಿಗೆ ಮೈ ಹುಷಾರಿಲ್ಲ ಬಿದ್ದು ಗಾಯವಾಗಿದೆ ಎಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಉಡುಪಿಯ ಬಿ.ಆರ್ ಶೆಟ್ಟಿ ಮಕ್ಕಳ ಆಸ್ಪತೆಗೆ ದಾಖಲಿಸಿದ್ದರು. ಮಗುವಿನ ಮೈ ಮೇಲೆ ಬರೆ ಹಾಕಿ ಹಾಗೂ ಹಲ್ಲೆ ನಡೆಸಿದ ಗಾಯದ ಗುರುತುಗಳು ಕಂಡುಬAದ ಹಿನ್ನಲೆಯಲ್ಲಿ ವೈದ್ಯರು ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಘಟನೆಯ ಕುರಿತು ಡಿಎಚ್ಓ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಇತ್ತ ಮಗು ಪ್ರಜ್ಞಾಹೀನವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾರಣದಿಂದ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನ ಹಾಗೂ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಧಾವಿಸಿ ಈ ಘಟನೆಯ ಕುರಿತು ಮಗುವಿನ ತಾಯಿ ಪೂರ್ಣಪ್ರಿಯಾ ಅವರಲ್ಲಿ ಘಟನೆಯ ಕುರಿತು ಮಾಹಿತಿ ಪಡೆಯಲು ಮುಂದಾದಾಗ ಅವರು ಸಮರ್ಪಕ ಉತ್ತರ ನೀಡದೇ, ಮಗುವಿನ ಅಣ್ಣ ಹೊಡೆದ ಪರಿಣಾಮ ಹೀಗಾಗಿದೆ ಎಂದು ಪ್ರಕರಣವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಮಗುವಿನ ಕೈ, ಬೆನ್ನು, ತೋಳುಗಳಿಗೆ ಬಲವಾದ ಗಾಯಗಳಾಗಿದ್ದು, ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ದುರಂತವೆAದರೆ ಮಗುವಿನ ತಂದೆ ಕಳೆದ ಒಂದು ವರ್ಷದ ಹಿಂದಷ್ಟೇ ಮೃತಪಟ್ಟಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿದ್ದ ಹಿನ್ನಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ ತಕ್ಷಣವೇ ಅಮಾಸೆಬೈಲು ಪೊಲೀಸ್ ಠಾಣೆಗೆ ಈ ಪ್ರಕರಣದ ಕುರಿತು ದೂರು ನೀಡಿದ್ದಾರೆ. ಈಗಾಗಲೇ ಪೊಲೀಸರು ಈ ಘಟನೆಯ ಕುರಿತು ಎಫ್ಐಆರ್ ದಾಖಲಿಸಿದ್ದು ಪ್ರಕರಣದ ಸಮಗ್ರ ತನಿಖೆಗೆ ಮುಂದಾಗಿದ್ದಾರೆ. ಇತ್ತ ಮಗು ಪ್ರಜ್ಞಾಹೀನ ಸ್ಥಿತಿಯಲಿದ್ದ ಕಾರಣ ಹಾಗೂ ತಾಯಿ ಕೂಡ ಘಟನೆಯ ಕುರಿತು ಸ್ಪಷ್ಟ ಮಾಹಿತಿ ನೀಡದ ಹಿನ್ನಲೆಯಲ್ಲಿ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಬಯಲಿಗೆ ಬರಬೇಕಿದೆ.
in