ಕಾರ್ಕಳ: ತಾಲೂಕಿನ ಜೋಡುರಸ್ತೆ ಸಾಯಿಪಂಚಮಿಯ ಪ್ರೀತಿ ಮಧುಕರ್ ಶೆಟ್ಟಿ ದಂಪತಿಗಳ ಪುತ್ರ ಮೇಧಾನ್ಶ್ ಮಧುಕರ್ ಶೆಟ್ಟಿ ಹೈದರಾಬಾದ್ ನಲ್ಲಿ ನಡೆದ ಓಪನ್ ಅಂತರಾಷ್ಟ್ರೀಯ ಮಟ್ಟದ ಟೇಕ್ವಾ0ಡೋ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾನೆ.
ಮೇಧಾನ್ಶ್ ಹಿರ್ಗಾನ ಮರಿಯಾ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸಂಸ್ಥೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿದ್ದಾರೆ.
ಇವನ ಸಾಧನೆಗೆ ವಿದ್ಯಾ ಸಂಸ್ಥೆ, ಹಾಗೂ ಕುಕ್ಕುಂದೂರು ಬಂಟರ ಸಂಘ,ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.