Share this news

ಕಾರ್ಕಳ: ತಾಲೂಕಿನ ಮಾಳ ಗ್ರಾಮದ ಕೂಡಬೆಟ್ಟು ಬಳಿ ವನಿತಾ ಎಂಬವರ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಸಮಸ್ಯೆ ಉಂಟಾಗಿತ್ತು. ಇದನ್ನು ಶಾಕಸ ವಿ. ಸುನಿಲ್ ಕುಮಾರ್ ಅವರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂದಿಸಿದ್ದು, ಶಾಸಕರು ಹಾಗೂ ಬೆಂಗಳೂರಿನ ಉದ್ಯಮಿಯೊಬ್ಬರ ಸಹಕಾರದಿಂದ ಆ ಮನೆಗೆ ಇನ್ವರ್ಟರ್ ಸಿಸ್ಟಂ ಅಳವಡಿಸಲಾಯಿತು.

ಭಾನುವಾರ ಸಂಜೆ ಶಾಸಕರು ದೇವರ ದೀಪದ ಸ್ವಿಚ್ ಹಾಕುವ ಮೂಲಕ ಸೋಲಾರ್ ಸಿಸ್ಟಂ ಅನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಡಾ. ಸತ್ಯನಾರಾಯಣ ಭಟ್, ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ, ಉಪಾಧ್ಯಕ್ಷೆ ವಿಮಲಾ ಪೂಜಾರಿ, ಮನೆಯ ಸದಸ್ಯರು, ಪಂಚಾಯತ್ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ದಾನಿಗಳನ್ನು ಸಂಪರ್ಕಿಸಿ ಸೋಲಾರ್ ಸೌಲಭ್ಯ ಕಲ್ಪಿಸುವಲ್ಲಿ ಮುತುವರ್ಜಿವಹಿಸಿದ ರಾಜೇಶ್ ನಾಯ್ಕ್ ಮಾಳ ಸ್ವಾಗತಿಸಿ, ಸುಧಾಕರ ಡೋಂಗ್ರೆ ವಂದಿಸಿದರು.

 

 

 

 

 

 

 

 

 

 

 

 

 

 


 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *