ಕಾರ್ಕಳ:ದೇವಸ್ಥಾನದ ಆಡಳಿತ ಮಂಡಳಿಯವರು ಅವ್ಯವಹಾರ ಮಾಡಿದ್ದಾರೆ ಎಂದು ಲೆಕ್ಕಪತ್ರ ಕೇಳಿದ ವ್ಯಕ್ತಿಗೆ ಆಡಳಿತ ಮೊಕ್ತೇಸರ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸೇರಿ ಹಲ್ಲೆ ನಡೆಸಿದ ಘಟನೆ ಕಾರ್ಕಳದ ಹಿರಿಯಂಗಡಿಯಲ್ಲಿ ನಡೆದಿದೆ.
ಹಿರಿಯಂಗಡಿ ನಿವಾಸಿ ಗುಣಪ್ರಕಾಶ್ ರಾವ್ (64) ಹಲ್ಲೆ ತೋಳ ಯಾದವರು. ಅವರು ಹಿರಿಯಂಗಡಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಭಕ್ತಾಧಿಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಅವ್ಯವಹಾರ ಮಾಡಿರುವ ವಿಚಾರ ತಿಳಿದು,ಮೇ 28 ರಂದು ಆಡಳಿತ ಮಂಡಳಿಯವರಿಗೆ ಲೆಕ್ಕಪತ್ರ ನೀಡುವಂತೆ ಕೋರಿ ನೊಟೀಸು ನೀಡಿದ್ದರು.
ಬಳಿಕ ಗುಣಪ್ರಕಾಶ್ ರಾವ್ ಮೇ 31 ರಂದು ಸಂಜೆ 8:30 ಗಂಟೆಗೆ ದೇವಸ್ಥಾನದ ಬಳಿ ಹೋದಾಗ ಆರೋಪಿಗಳಾದ ಗಿರೀಶ್ , ಸುದೀಂದ್ರ ,ದಯಾನಂದ್ ರಾವ್, ರಾಮಚಂದ್ರ,ವೀರೆಂದ್ರ ಸೇರಿಕೊಂಡು ಏಕಾಎಕಿ ಗುಣಪ್ರಕಾಶ್ ಅವರ ಕೊರಳ ಪಟ್ಟಿಯನ್ನು ಹಿಡಿದು ಕಾಲಿನಿಂದ ಒದ್ದು ಬೆದರಿಕೆ ಹಾಕಿ ಮೊಬೈಲ್ ಪೋನ್ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ