Share this news

ಕಾರ್ಕಳ:ಹೆರಿಗೆಯಾದ ಕೇವಲ ಒಂದೇ ವಾರದಲ್ಲಿ ಬಾಣಂತಿ ಮಹಿಳೆ ಮಗುವಿನೊಂದಿಗೆ ತವರು ಮನೆಗೆ ಹೋದ ಒಂದೇ ವಾರದಲ್ಲಿ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೇ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಇರ್ವತ್ತೂರು ಜಂಗರಬೆಟ್ಟು‌ ಎಂಬಲ್ಲಿ ನಡೆದಿದೆ.
ಸಂಪ್ರೀತಾ (34) ಎಂಬವರು ಮೃತಪಟ್ಟ ಬಾಣಂತಿ. ಅವರು ಕಳೆದ ಮೇ 30 ರಂದು ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿ ಬಳಿಕ ಮಗುವಿನ ಜತೆ ತವರು ಮನೆಗೆ ತೆರಳಿದ್ದರು.
ಹೆರಿಗೆಯಾದ ಬಳಿಕ ಜೂ 05 ರಂದು ಸಂಜೆ 5.30 ಗಂಟೆಗೆ ಸಂಪ್ರೀತಾ ಏಕಾಎಕಿ ಅಸ್ವಸ್ಥಗೊಂಡಾಗ ತಕ್ಷಣವೇ ಅವರ ತಾಯಿ ಕುಶಲ ಮತ್ತು ಗಂಡ ಹರೀಶ್ ರವರು ಚಿಕಿತ್ಸೆಗೆಂದು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ವಾಂತಿ ಮಾಡಿ ಪ್ರಜ್ಞಾಹೀನಗೊಂಡಿದ್ದರು.ಬಳಿಕ ಚಿಕಿತ್ಸೆ ಮುಂದುವರಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ‌.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *