Share this news

ಕಾರ್ಕಳ:ಅಜೆಕಾರು ಪೊಲೀಸರು ಗುರುವಾರ ರಾತ್ರಿ ಕೈಕಂಬ ಬಳಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಸ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ KA-19-MB-8753 ಮಹೀಂದ್ರಾ ಬೊಲೆರೊ ವಾಹನವನ್ನು ತಡೆಯಲು ಮುಂದಾದ ವೇಳೆ ಚಾಲಕ ನಿಲ್ಲಿಸದೇ ಕಾರ್ಕಳ ಕಡೆಗೆ ಪರಾರಿಯಾಗಲು ಯತ್ನಿಸಿದಾಗ ಅಜೆಕಾರು ಎಸ್ಐ ರವಿ ಕಾರಗಿ ನೇತೃತ್ವದ ಪೊಲೀಸರ ತಂಡ ಬೊಲೆರೊ ವಾಹನವನ್ನು ಬೆನ್ನಟ್ಟಿ ಎಣ್ಣೆಹೊಳೆ ಬಳಿ ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಹರಿತವಾದ ಡ್ರ್ಯಾಗರ್ ಪತ್ತೆಯಾಗಿದೆ. ಆರೋಪಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಯಾವುದೋ ದುಷ್ಕೃತ್ಯ ಎಸಗಲು ಸಂಚು ರೂಪಿಸಲು ಮಾರಕಾಸ್ತ್ರ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.ತಕ್ಷಣವೇ ವಾಹನ ಹಾಗೂ ಡ್ರ್ಯಾಗರ್ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *