Share this news

 

 

 

ಕಾರ್ಕಳ: ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿಯನ್ನು ಆತನ ಪತ್ನಿ ಪ್ರತಿಮಾ ಪ್ರಿಯತಮನ ಜತೆ ಸೇರಿ ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆಗೈದ ಪ್ರಕರಣದ  A2 ಆರೋಪಿ ಹಿರ್ಗಾನದ ನಿವಾಸಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದೆ.

ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಖತರ್ನಾಕ್ ಕಿಲ್ಲರ್ ಲೇಡಿ ಪ್ರತಿಮಾಗೆ ಇನ್ಸ್ಟಾಗ್ರಾಂ ಮೂಲಕ ದಿಲೀಪ್ ಹೆಗ್ಡೆ ಎಂಬಾತನ ಪರಿಚಯವಾಗಿತ್ತು. ಇದೇ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಇವರಿಬ್ಬರ ನಡುವೆ ಅನೈತಿಕ ಸಂಬAಧಕ್ಕೆ ಕಾರಣವಾಯಿತು. ನಂತರ ಪತ್ನಿಯ ಪಲ್ಲಂಗದಾಟದ ವಿಚಾರ ಗಂಡನ ಗಮನಕ್ಕೆ ಬಂದು ಬಳಿಕ ಅಜೆಕಾರು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೊನೆಗೂ ಗಂಡನ ಬಲವಂತಕ್ಕೆ ಪ್ರತಿಮಾ ಒಲ್ಲದ ಮನಸ್ಸಿನಿಂದ ಗಂಡನ ಜತೆಗಿದ್ದಳು,ಇದೇ ವಿಚಾರದಲ್ಲಿ ಠಾಣೆಯಲ್ಲಿ ಎನ್’ಸಿಅರ್ ಕೂಡ ದಾಖಲಾಗಿತ್ತು.

ಆದರೆ ತಮ್ಮ ಅಕ್ರಮ ಸಂಬAಧಕ್ಕೆ ಅಡ್ಡಿಯಾಗುತ್ತಾನೆ ಎಂದರಿತ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಬಾಲಕೃಷ್ಣ ಪೂಜಾರಿಯನ್ನು ಆಹಾರದಲ್ಲಿ ಸ್ಲೋ ಪಾಯಿಸನ್ ನೀಡಿ ಕೊಲ್ಲುವ ಭಯಾನಕ ಸಂಚು ರೂಪಿಸಿದ್ದರು. ಪತಿಯ ಹತ್ಯೆ ಸಂಚು ಮನೆಯವರಿಗೆ ಅನುಮಾನ ಬರದರಲಿ ಎಂದು ಆತನ ಆರೋಗ್ಯ ಕೆಟ್ಟಾಗ ಆಕೆಯೇ ಪತಿಯನ್ನು ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಳು, ಆತನನ್ನು ಪದೇಪದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಬದಲಾಯಿಸಿ ಕೊನೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮೃತ ಬಾಲಕೃಷ್ಣ ಪೂಜಾರಿ ಸಹೋದರಿ ಆಸ್ಪತ್ರೆಯಲ್ಲಿ ಆರೋಗ್ಯದ ಕುರಿತು ನಿಗಾವಹಿಸಿದ ಹಿನ್ನೆಲೆಯಲ್ಲಿ ಬಾಲಕೃಷ್ಣ ಪೂಜಾರಿ ಚೇತರಿಸಿಕೊಂಡಿದ್ದರು.

ಇದಾದ ಬಳಿಕ ತನ್ನ ತಂತ್ರಗಾರಿಕೆ ಕೈಕೊಡುವ ಭಯದಿಂದ ಅಕ್ಟೋಬರ್ 18 ರ ತಡರಾತ್ರಿ ಪ್ರತಿಮಾ ಬಲವಂತವಾಗಿ ಪತಿಯನ್ನು ಬೆಂಗಳೂರಿನಿAದ ಅಜೆಕಾರಿಗೆ ಕರೆತಂದಿದ್ದಳು. ಬಳಿಕ ಅಂದು ರಾತ್ರಿಯೇ ಪ್ರಿಯತಮ ದಿಲೀಪ್ ಹೆಗ್ಡೆಯನ್ನು ಕರೆಸಿಕೊಂಡು ಮಲಗಿದ್ದಲ್ಲಿ ದಿಂಬಿನಿAದ ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದರು ಎಂದು ಇಬ್ಬರು ಆರೋಪಿಗಳು ಪೊಲೀಸರ ತನಿಖೆಯಲ್ಲಿ ಬಾಯಿಬಿಟ್ಟಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಜೆಕಾರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

Leave a Reply

Your email address will not be published. Required fields are marked *