Share this news

ಕಾರ್ಕಳ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಕಾರ್ಕಳ ಹಿರ್ಗಾನ ಗ್ರಾಮದ ದಿಲೀಪ್ ಹೆಗ್ಡೆಗೆ ನ.7 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕಾರ್ಕಳ ನ್ಯಾಯಾಲಯ ಆದೇಶಿಸಿದೆ.

ಹಿರ್ಗಾನದ ದಿಲೀಪ್ ಹೆಗ್ಡೆ ಪ್ರಿಯತಮೆ ಪ್ರತಿಮಾಳೊಂದಿಗೆ ಸೇರಿ ಆಕೆಯ ಪತಿಯ ಕೊಲೆ ಮಾಡಲು ಸಹಕರಿಸಿದ್ದ. ಮೃತ ಬಾಲಕೃಷ್ಣ ಪೂಜಾರಿಗೆ ನೀಡಲು ಸ್ಲೋ ಪಾಯ್ಸನ್ ಖರೀಸಿದಿ ತಂದು ಕೊಟ್ಟಿದ್ದಲ್ಲದೇ, ಆತನನ್ನು ಉಸಿರುಗಟ್ಟಿಸಿ ಕೊಲೆಗೈಯಲು ಪ್ರತಿಮಾಳೊಂದಿಗೆ ಕೈಜೋಡಿಸಿದ್ದ. ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದಲ್ಲಿ ಶುಕ್ರವಾರ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.
ಪೊಲೀಸ್ ಕಸ್ಟಡಿ ಅಂತ್ಯಗೊAಡ ಹಿನ್ನಲೆಯಲ್ಲಿ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

 

 

Leave a Reply

Your email address will not be published. Required fields are marked *