ಅಜೆಕಾರು: ಮಧ್ಯವರ್ತಿಯ ಮೂಲಕ ಗೇರುಬೀಜ ಉತ್ಪನ್ನಗಳನ್ನು ಖರೀದಿಸಿ ಹಣ ಕೊಡದೇ ವಂಚಿಸಿರುವ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ನಡೆದಿದೆ.
ಶಿರ್ಲಾಲಿನ ಶ್ರೀಮತಿ ಪ್ರವೀಣಾ ಎಂಬವರ ಮಾಲಕತ್ವದ ಭ್ರಾಹ್ಮರಿ ಕ್ಯಾಶ್ಯೂ ಇಂಡಸ್ಟ್ರಿಸ್ ನಿಂದ ಆರೋಪಿಗಳಾದ ನವಿ ಮುಂಬೈನ ಮಹಾವೀರ್ ಟ್ರೇಡಿಂಗ್ ಕಂಪನಿಯ ಮಾಲಕಿ ಶ್ರೀಮತಿ ಭಾರತಿ ಸಾವ್ಲವಾಶಿ, ಆಕೆಯ ಗಂಡ ನಿಲೇಶ್ ಸಾವ್ಲ ಮತ್ತು ಆಕೆಯ ಸಹೋದರ ಪಿಯುಶ್ ಗೋಗ್ರಿ ಎಂಬವರು ಮಂಗಳೂರಿನ ಏಜೆಂಟ್ ನಿಖಿಲ್ ಎನ್.ಥಾಕರ್ ಎಂಬವರ ಮೂಲಕ ಪ್ರವೀಣಾ ಅವರನ್ನು ಸಂಪರ್ಕಿಸಿ ಗೇರು ಉತ್ಪನ್ನಗಳ ಬೇಡಿಕೆ ಇಟ್ಟಿದ್ದು, ಅದರಂತೆ ಪ್ರವೀಣಾ ಅವರು ಸುಮಾರು ರೂ 18,43,380/- ಮೌಲ್ಯದ ಗೇರು ಉತ್ಪನ್ನಗಳನ್ನು ದಿನಾಂಕ 14/10/2023 ರಂದು ಟ್ಯಾಕ್ಸ್ ಇನ್ವಯ್ಸ್ ನಂಬ್ರ 74 ರಂತೆ ವಿ.ಆರ್.ಎಲ್ ಲಾಜಿಸ್ಟಿಕ್ ಮೂಲಕ ಆರೋಪಿಗಳ ಕಂಪನಿಗೆ ಕಳುಹಿಸಿದ್ದರು.
ಗೇರು ಬೀಜದ ಉತ್ಪನ್ನಗಳು ಆರೋಪಿಗಳಿಗೆ ತಲುಪಿದ ನಂತರ ಹಣವನ್ನು ಸಂಸ್ಥೆಯ ಖಾತೆಗೆ ಜಮಾ ಮಾಡುವಂತೆ ಕೇಳಿಕೊಂಡಾಗ ಆರೋಪಿಗಳು ಸಮಯವಕಾಶ ಕೇಳಿದ್ದು, ನಂತರ ಕೂಡಾ ಆರೋಪಿಗಳು ಸಮಯವಕಾಶ ಕೇಳಿದಂತೆ ಪ್ರವೀಣಾರವರು ಸಮಯವಕಾಶ ಕೊಟ್ಟಿದ್ದು, ಮತ್ತೆ 2 ತಿಂಗಳುಗಳ ನಂತರ ಕರೆ ಮಾಡಿದಾಗ ಆರೋಪಿಗಳು ಕರೆಯನ್ನು ಸ್ವೀಕರಿಸದೇ ವಂಚನೆ ಎಸಗಿದ್ದಾರೆ ಎಂದು ಪ್ರವೀಣಾ ಅಜೆಕಾರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ