ಕಾರ್ಕಳ:ಮದುವೆಯ ಸಾಂಪ್ರದಾಯಿಕ ಸೀರೆಗಳಿಗೆ ಹಾಗೂ ಮಹಿಳೆಯರ ಉಡುಪುಗಳಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಮಾತಾಗಿರುವ ಅವತಾರ್ ಸಿಲ್ಕ್ಸ್ ನ 4ನೇ ಶಾಖೆಯು ಪಡುತಿರುಪತಿ ಖ್ಯಾತಿಯ ಕಾರ್ಕಳದಲ್ಲಿ ಸೋಮವಾರ ಶುಭಾರಂಭಗೊAಡಿದೆ.
ಕಾರ್ಕಳದ ವೆಂಕಟರಮಣ ದೇವಸ್ಥಾನದ ಸುಧೀಂದ್ರ ರೆಸಿಡೆನ್ಸಿಯ ಮೊದಲ ಮಹಡಿಯಲ್ಲಿ ನೂತನ ಅವತಾರ್ ಲ್ಕ್ಸ್ ನ ಮಳಿಗೆಯನ್ನು ಖ್ಯಾತ ಉದ್ಯಮಿ ಬೋಳ ಪ್ರಭಾಕರ ಕಾಮತ್ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಕಾರ್ಕಳ ವೆಂಕಟಮರಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು, ಶಿಕ್ಷಕಿ ವಂದನಾ ರೈ, ಜೆಸಿಐ ತರಬೇತುದಾರ ರಾಜೇಂದ್ರ ಭಟ್, ಕಟ್ಟಡ ಮಾಲಕ ಜಗದೀಶ್ ಶೆಣೈ,
ಹೊನ್ನಾವರದ ಉದ್ಯಮಿಗಳಾದ ಮಂಗಳದಾಸ ಕಾಮತ್ ಮತ್ತು ಲತಾ ಕಾಮತ್, ಸಂಸ್ಥೆಯ ಮಾಲಕ ವರದ ಎಂ.ಕಾಮತ್, ಉದ್ಯಮಿಗಳಾದ ಪರಶುರಾಮ ಕಿಣಿ ಬಿ. ಎಸ್.ನಿತ್ಯಾನಂದ ಪೈ, ಅನಂತಕೃಷ್ಣ ಶೆಣೈ, ಪೂರ್ಣಿಮಾ ಸಿಲ್ಕ್÷್ಸ ಮಾಲಕ ರವಿಪ್ರಕಾಶ್ ಪ್ರಭು, ತುಕಾರಾಮ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ವರದ ಎಂ.ಕಾಮತ್ ಎಲ್ಲಾ ಅತಿಥಿಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.
ಸುಧೀಂದ್ರ ರೆಸಿಡೆನ್ಸಿಯ ಮೊದಲ ಮಹಡಿಯಲ್ಲಿನ ಸುಮಾರು 4500 ಸಾವಿರ ಚದರ ಅಡಿಯ ವಿಶಾಲವಾದ ವಸ್ತç ಮಳಿಗೆಯಾಗಿರುವ ಅವತಾರ್ ಲ್ಕ್ಸ್ ನಲ್ಲಿ ಪ್ರಮುಖವಾಗಿ ಸಾಂಪ್ರದಾಯಿಕ ಮದುವೆ ಸೀರೆಗಳು, ಮಹಿಳೆಯರ ಆಯ್ಕೆಯ ಕುರ್ತೀಸ್, ಲೆಹೆಂಗಾ, ತ್ರೀಪೀಸ್ ಗೌನ್, ಕಾಟನ್, ಫ್ಯಾನ್ಸಿ ಹಾಗೂ ರೇಶ್ಮೆ ಸೀರೆಗಳ ಅಪಾರ ಸಂಗ್ರಹವಿದೆ. ಇದಲ್ಲದೇ ಕೈಮಗ್ಗದ ಟವೆಲ್ ಸೇರಿದಂತೆ ಸಾಕಷ್ಟು ವಿನ್ಯಾಸದ ವಸ್ತ್ರ ಗಳ ಸಂಗ್ರಹವಿದೆ. ಇದಲ್ಲದೇ ಉದ್ಘಾಟನೆಯ ಅಂಗವಾಗಿ ಸೆ 30ರವರೆಗೆ ಪ್ರತೀ ಖರೀದಿಯ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲಾಗುತ್ತದೆ.
in