ಕೊಯಮತ್ತೂರು:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಸ್ಪರ್ಧೆ ಭಾರೀ ಕುತೂಹಲ ಕೆರಳಿಸಿತ್ತು.
ಮಾಜಿ ಐಪಿಎಸ್ ಅಧಿಕಾರಿಯಾಗಿ ಉತ್ತಮ ಜ್ಞಾನ ಹೊಂದಿದ್ದ ಅಣ್ಣಾಮಲೈ ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಅವರು ತಮ್ಮ ಎದುರಾಳಿಯ ವಿರುದ್ಧ ಕೇವಲ 17 ಸಾವಿರ ಮತಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ ಭಾರೀ ಸಂಚಲನ ಮೂಡಿಸಿದ್ದ ಅಣ್ಣಾಮಲೈ ಗೆಲ್ಲುವ ಮೂಲಕ ಡಿಎಂಕೆ ಪಕ್ಷಕ್ಕೆ ಟಕ್ಕರ್ ಕೊಟ್ಟು ಕೇಂದ್ರ ಸಚಿವರಾಗುತ್ತಾರೆ ಎಂಬ ನಿರೀಕ್ಷಿಸಲಾಗಿತ್ತು.