ನವದೆಹಲಿ: ಆಕಸ್ಮಿಕವಾಗಿ ಭಾರತದ ಗಡಿದಾಟಿ ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟ ಭಾರತೀಯ ಯೋಧ ಪುರ್ನಮ್ ಕುಮಾರ್ ಶಾ ಅವರನ್ನು ಭಾರತದ ಮಾತುಕತೆಯ ಬಳಿಕ ಪಾಕಿಸ್ತಾನ ಸೇನೆಯು ಬಿಡುಗಡೆಗೊಳಿಸಿ ಭಾರತಕ್ಕೆ ಹಸ್ತಾಂತರಿಸಿದೆ. ಯುದ್ಧದ ಸನ್ನಿವೆಶದಲ್ಲಿ ಬಿಎಸ್ಎಫ್ ಯೋಧನ ಬಿಡುಗಡೆಯಿಂದ ಭಾರತಕ್ಕೆ ಭಾರೀ ಜಯ ಸಿಕ್ಕಂತಾಗಿದೆ. ಪಾಕಿಸ್ತಾನ ಸೇನೆಯ ರೇಂಜರ್ ಗಳು ಭಾರತದ ಅಟಾರಿ-ವಾಘಾ ಗಡಿಯಲ್ಲಿ ಯೋಧ ಪುರ್ನಾಮ್ ಕುಮಾರ್ ಅವರನ್ನು ಭಾರತಕ್ಕೆ ಒಪ್ಪಿಸಿದ್ದಾರೆ.
ಪಂಜಾಬ್ ನ ಫಿರೋಜ್ ಪುರದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ ಎಫ್ ಯೋಧ ಪುರ್ನಾಮ್ ಏ 23ರಂದು ಅಂತರಾಷ್ಟ್ರೀಯ ಗಡಿ ದಾಟಿದ್ದು, ಇದೇ ವೇಳೆ ಪಾಕಿಸ್ತಾನ ರೇಂಜರ್ ಗಳು ಅವರನ್ನು ವಶಕ್ಕೆ ಪಡೆದಿದ್ದರು. ಇದೀಗ 20 ದಿನದ ಬಳಿಕ ಪುರ್ನಾಮ್ ಶಾನನ್ನು ಬಿಟ್ಟು ಕಳುಹಿಸಿದ್ದಾರೆ.