ಕಾರ್ಕಳ: ಋಷಿ ಮುನಿಗಳ ತಪೋಭೂಮಿಯಾಗಿರುವ ಕಾರ್ಕಳದ ಪರ್ಪಲೆಗಿರಿಯಲ್ಲಿ ಕಾಲಾಂತರದಲ್ಲಿ ಭೂಗರ್ಭದಲ್ಲಿ ಹುದುಗಿಹೋಗಿದ್ದ ತುಳುನಾಡಿನ ಕಾರಣೀಕ ದೈವಗಳಾದ ಕಲ್ಕುಡ,ಕಲ್ಲುರ್ಟಿ ಹಾಗೂ ತೂಕತ್ತರೀ ದೈವಗಳು ಭಗವಂತನ ಇಚ್ಚೆಯನುಸಾರ ಮತ್ತೆ ಅವತರಿಸಿ ಗತವೈಭವವನ್ನು ಸಾರಲು ಸಜ್ಜಾಗಿದೆ. ಕರಿಯಕಲ್ಲು ಎಂದೇ ಪ್ರಸಿದ್ಧಿಪಡೆದಿರುವ ಕಾರ್ಕಳವು ಧರ್ಮಕಾರ್ಯದ ಪುಣ್ಯಭೂಮಿಯೂ ಹೌದು. ತ್ಯಾಗಮೂರ್ತಿ ಗೊಮಟೇಶ್ವರ ಬಾಹುಬಲಿ ಬೆಟ್ಟದಲ್ಲಿ ನೆಲೆಯಾದರೆ,ಇತ್ತ ಗೋಮಟೇಶ್ವರ ಬೆಟ್ಟದಿಂದ ಸ್ವಲ್ಪವೇ ದೂರವಿರುವ ಪರ್ಪಲೆ ಬೆಟ್ಟವು ಪುರಾತನ ಕಾಲದಲ್ಲಿ ಋಷಿ ಮುನಿಗಳ ತಪೋಭೂಮಿಯಾಗಿದೆ. ಇಲ್ಲಿನ ಗುಹೆಯೊಳಗೆ ಖಷಿಮುನಿಗಳು ತಪಸ್ಸು ಮಾಡಿರುವ ಕುರುಹುಗಳು ಇಂದಿಗೂ ಇದೆ.
1432ರಲ್ಲಿ ಕಾರ್ಕಳದಲ್ಲಿ ಗೋಮಟೇಶ್ವರನ ಬೃಹತ್ ಮೂರ್ತಿ ಸ್ಥಾಪನೆ ಆದ ಬಳಿಕ ವಿಗ್ರಹವನ್ನು ಕೆತ್ತಿದ ವೀರ ಕಲ್ಕುಡನಿಗೆ ಉಡುಗೊರೆ ರೂಪದಲ್ಲಿ ಪರ್ಪಲೆಯ ಭೂಮಿಯನ್ನು ಉಡುಗೊರೆಯಾಗಿ ನೀಡುವುದಾಗಿ ಅರಸರು ಆಶ್ವಾಸನೆ ನೀಡಿದ್ದರು ಎನ್ನುವುದು ಪ್ರತೀತಿ. ತಿರುಪತಿ ಯಾತ್ರೆ ಮುಗಿಸಿ ಬಂದ ಕಲ್ಕುಡ ತನಗೆ ಉಡುಗೊರೆಯಾಗಿ ನೀಡಿದ್ದ ಪರ್ಪಲೆಗಿರಿಯಲ್ಲಿ ಪಾದ ಊರಿದ ಹಿನ್ನಲೆಯಲ್ಲಿ ಇದು ಕಲ್ಕುಡ ಸಾನಿಧ್ಯವಾಯಿತು ಎನ್ನುವುದು ಇತಿಹಾಸ ಸಂಶೋಧಕರ ಅಧ್ಯಯನದಿಂದ ತಿಳಿಯುತ್ತದೆ.
ಪುರಾತನ ಧಾರ್ಮಿಕ ಹಿನ್ನಲೆಯ ಕುಲ್ಕುಡ, ಕಲ್ಲುರ್ಟಿ ಹಾಗೂ ತೂಕತ್ತರೀ ಧರ್ಮದೈವಗಳ ಸಾನಿಧ್ಯವನ್ನು ಅಭಿವೃದ್ದಿಪಡಿಸಲಾಗಿದ್ದು, ದೈವಗಳ ಬಿಂಬ ಪುನಃಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶೋತ್ಸವಕ್ಕೆ ಸಜ್ಜಾಗಿದೆ.
ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ವಿ. ಸುನಿಲ್ ಕುಮಾರ್, ಬೋಳ ಪ್ರಭಾಕರ ಕಾಮತ್ ಉದ್ಯಮಿಗಳು, ಎಮ್. ಕೆ. ವಿಜಯ ಕುಮಾರ್, ಎನ್. ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿನಯ ಹೆಗ್ಡೆ, ವಿಠಲ ಶೆಟ್ಟಿ ಬಲಿಪಗುತ್ತು, ಅತ್ತೂರು, ಕಾರ್ಕಳ ವೆಂಣಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಕಾರ್ಯನಿರ್ವಹಿಸುತ್ತಿದ್ದಾರೆ.
ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಅಧ್ಯಕ್ಷರಾಗಿ ಡಾ| ರವೀಂದ್ರ ಶೆಟ್ಟಿ ಬಜಗೋಳಿ,ಕಾರ್ಯಾಧ್ಯಕ್ಷರಾಗಿ ಬೋಳ ಪ್ರಶಾಂತ್ ಕಾಮತ್ ಹಾಗೂ ಕೋಶಾಧಿಕಾರಿಯಾಗಿ ಎಸ್.ನಿತ್ಯಾನಂದ ಪೈ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ) ಇದರ ಅಧ್ಯಕ್ಷರಾಗಿ ಸುಭಾಸ್ ಚಂದ್ರ ಹೆಗ್ಡೆ ನಿಟ್ಟೆ, ಕಾರ್ಯದರ್ಶಿಯಾಗಿ ಸತ್ಯೇಂದ್ರ ಭಟ್, ಕೋಶಾಧಿಕಾರಿಯಾಗಿ ಚೇತನ್ ಕೋಟ್ಯಾನ್ ಹಾಗೂ ಟ್ರಸ್ಟಿಗಳಾಗಿ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ, ಮನ್ಮಥ ಜೆ. ಶೆಟ್ಟಿ, ಚಂದ್ರಶೇಖರ ಶೆಟ್ಟಿ , ಪ್ರಶಾಂತ್ ನಾಯಕ್ ಕಾರ್ಯನಿರ್ವಹಿಸುತ್ತಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳ ವಿವರಗಳು:
ಮೇ 17 ರಂದು ಶನಿವಾರ ಮಧ್ಯಾಹ್ನ 3 ಗಂಟೆಯಿAದ ಕಾರ್ಕಳ ಬಂಡೀಮಠ ಮೂಡುಮಹಾಗಣಪತಿ ದೇವಸ್ಥಾನದಿಂದ ಪರ್ಪಲೆಗಿರಿಯವರೆಗೆ ವೈಭವದ ಹಸಿರು ಕಾಣಿಕೆ ಮರೆವಣಿಗೆ ನಡೆಯಲಿದೆ. ಮೇ 18ರಂದು ಭಾನುವಾರ ಸಂಜೆ 5 ರಿಂದ ಸಾಮೂಹಿಕ ಪ್ರಾರ್ಥನೆ,ತೋರಣ ಮುಹೂರ್ತ,ಉಗ್ರಾಣ ಮುಹೂರ್ತ,ಗೋಪ್ರವೇಶ,ವಾಸ್ತುಪೂಜೆ,ವಾಸ್ತು ಹೋಮ,ರಾಕ್ಷೋಘ್ನ ಹೋಮ,ದ್ವಾರ ಪೂಜೆ,ಧ್ಯಾನಾದಿವಾಸ ಮುಂತಾದ ವಿಧಿವಿಧಾನಗಳು ಜರುಗಲಿವೆ. ಮೇ 19ರಂದು ಬೆಳಗ್ಗೆ 7.30ರಿಂದ ಪುಣ್ಯಾಹ,ಮಹಾಗಣಪತಿ ಯಾಗ, ಅಷ್ಟೋತ್ತರ ಶತ ಕಲಶ ಪ್ರತಿಷ್ಠೆ,ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ನಾಗ, ರಕ್ತೇಶ್ವರಿ, ಪಂಜುರ್ಲಿ, ಕಲ್ಕುಡ,ಕಲ್ಲುರ್ಟಿ ಹಾಗೂ ತೂಕತ್ತರೀ ದೈವಗಳ ಪ್ರತಿಷ್ಠೆ,ಜೀವ ಕಲಶಾಭಿಷೇಕ,ಶಾಂತಿ ಪ್ರಾಯಶ್ಚಿತ ಯಾಗಾದಿಗಳು ನಡೆಯಲಿವೆ. ಬೆಳಗ್ಗೆ 10.30 ರಿಂದ 108 ಕಲಶಸಹಿತ ಸಾನಿಧ್ಯ ಕಲಶೋತ್ಸವ, ಮಹಾಪೂಜೆ,ಮಹಾಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ, 11.30 ರಿಂದ ನೇಮೋತ್ಸವದ ಚಪ್ಪರ ಆರೋಹಣ, ಸಾಯಂಕಾಲ 4 ಗಂಟೆಗೆ ನೇಮೋತ್ಸವದ ಪ್ರಯುಕ್ತ ದೈವಗಳ ಭಂಡಾರ ಇಳಿಯುವುದು, ಬಳಿಕ ಸಂಜೆ 6 ರಿಂದ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಕಟಪಾಡಿ ಆನೆಗೊಂದಿ ಸಂಸ್ಥಾನದ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಭಾ ಕಾರ್ಯಕ್ರಮವನ್ನು ಎಂ,ಆರ್,ಜಿ ಗ್ರೂಫ್ ಆಡಳಿತ ನಿರ್ದೇಶಕ ಡಾ.ಕೆ ಪ್ರಕಾಶ್ ಶೆಟ್ಟಿ ಉದ್ಗಾಟಿಸಲಿದ್ದು, ಕೊಡಿಅಡಿಯನ್ನು ಉದ್ಯಮಿ ಚೇತನ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಬೋಳ ಪ್ರಭಾಕರ ಕಾಮತ್ ವಹಿಸಲಿದ್ದಾರೆ. ಬಳಿಕ ರಾತ್ರಿ 8.30 ರಿಂದ ಪಂಜುರ್ಲಿ, ಕಲ್ಕುಡ, ಕಲ್ಲುರ್ಟಿ ಹಾಹೂ ತೂಕತ್ತರೀ ದೈವಗಳ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿದೆ.