Share this news

 

 

 ಹೆಬ್ರಿ:ಸಂತೆಕಟ್ಟೆ ಸಮೀಪದ ನಾಲ್ಕೂರು ಎಂಬಲ್ಲಿ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಗತ್ಯವಾಗಿದೆ. ನಾಲ್ಕೂರು ನಿವಾಸಿ ಗಣಪತಿ ನಾಯ್ಕ (45) ಎಂಬವರು ತನ್ನ ಪತ್ನಿ ಜಯಂತಿ ಎಂಬಾಕೆಯಿಂದ ಹತ್ಯೆಗೀಡಾದ ವ್ಯಕ್ತಿ.

ವಿಪರೀತ ಕುಡಿತದ ಚಟ ಹೊಂದಿದ್ದ ಗಣಪತಿ ನಾಯ್ಕ ಅವರು ಪತ್ನಿ ಜತೆ ನಿರಂತರ ಜಗಳವಾಡುತ್ತಿದ್ದ. ಕೂಲಿ ಕೆಲಸ ಮಾಡುತ್ತಿದ್ದ ಗಣಪತಿ ಬುಧವಾರ ಕೆಲಸಕ್ಕೆ ಹೋಗದೇ ಮಧ್ಯಾಹ್ನ ಕುಡಿದು ಬಂದು ಪತ್ನಿ ಜಯಂತಿ ಬಳಿ ಹಣಕ್ಕಾಗಿ ಪೀಡಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪತ್ನಿ ಜಯಂತಿ ಕತ್ತಿಯಿಂದ ಗಂಡನ ಕುತ್ತಿಗೆಗೆ ಕಡಿದ ಪರಿಣಾಮವಾಗಿ ಆತ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದ.
ಈ ಕುರಿತು ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

 

 

 

 

 

 

 

 

 

 

Leave a Reply

Your email address will not be published. Required fields are marked *