ಹೆಬ್ರಿ: ಹೆಬ್ರಿಯ ಮನೆಯೊಂದರಲ್ಲಿ ಹೋಂ ನರ್ಸ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿ ಮನೆಯಲ್ಲಿದ್ದ ನಗದು ದೋಚಿ ಪರಾರಿಯಾಗಿರುವ ಘಟನೆ ಅ.27 ರಂದು ನಡೆದಿದೆ.
ಹೆಬ್ರಿಯ ಅನಂತ ಆನಂದ ಶೆಣೈ ರವರ ಮನೆಯಲ್ಲಿ ಊರ್ಜಿ ಹೋಂ ಕೇರ್ ಎಜೆನ್ಸಿ ಸೂರತ್ಕಲ್ ಕಡೆಯವರಿಂದ ಹೋಂ ನರ್ಸ್ ಆಗಿ ಕೆಲಸಮಾಡಿಕೊಂಡಿದ್ದ ಚರಣ್ ದೀಕ್ಷಿತ್ ಎಸ್ ಆರ್ ಎಂಬವರು ಅ.27 ರಂದು ಮನೆಯವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿಟಾಚಿಯವರಿಗೆ ಕೊಡಲು ಅನಂತ ಆನಂದ ರವರು ತನ್ನ ತಾಯಿಯ ಮೆಡಿಸಿನ್ ಬಾಕ್ಸ್ ನಲ್ಲಿ ಇಟ್ಟಿದ್ದ 60000 ರೂ ಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.