Share this news

ಕಾರ್ಕಳ ಸೆ.25: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿ ಅಕ್ರಮ ಕಲ್ಲುಕೋರೆಗೆ ದಾಳಿ ನಡೆಸಿದ ಪೊಲೀಸರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರ್ಕಳ ನಗರ ಪೊಲೀಸ್‌ ಠಾಣೆ ಪೊಲೀಸ್‌ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್ ಅವರು ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿರುವ ಸರ್ವೇ ನಂಬ್ರ 245 ರ ಸರಕಾರಿ ಸ್ಥಳದಲ್ಲಿ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಯವರಾದ ಹೆಚ್‌ಸಿ, ಗೋಪಾಲಕೃಷ್ನ, ಪಿಸಿ, ಗಜ ನಾಯ್ಕ್‌ ಎಂಬರೊಂದಿಗೆ ದಾಳಿ ನಡೆಸಿದಾಗ ಕಲ್ಲು ಗಣಿಕಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ರಮೇಶ್‌ ಶೆಟ್ಟಿ ಎಂಬವರ ಸೂಚನೆಯಂತೆ ಪರವಾನಿಗೆ ಇಲ್ಲದೆ ಸ್ವಂತ ಲಾಭಕ್ಕಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಹಿನ್ನೆಲೆ ಆರೋಪಿಗಳಾದ ರಮೇಶ್‌ ಶೆಟ್ಟಿ, ರಾಜೇಶ, ರಾಜ, ದುರ್ಗೇಶ, ಗೋಪಾ ನಾಯರ್, ಶಿವರಾಜ್, ಸುಬ್ರಹ್ಮಣ್ಯ, ರವಿ, ಚೆಲುವ, ರವಿ, ಚಿನ್ನು, ರಾಜ ಎಂಬವರ ವಿರುದ್ಧ ಪ್ರಕರಣ ದಾಖಲಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *