ಕಾರ್ಕಳ: ತಾಲೂಕಿನ ಕಣಂಜಾರು ಚೇತನಾ ಪುರುಷರ ಮಹಾಸಂಘದ ವತಿಯಿಂದ ಕಣಜಾರು ಜೀವನ ಜ್ಯೋತಿ ವಠಾರದಲ್ಲಿ “ಗಾದ್ಯಾಂತ್ ಏಕ್ ದೀಸ್… 2024” ಕಾರ್ಯಕ್ರಮ ನಡೆಯಿತು.
ಕಣಜಾರಿನ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್ ನ ಧರ್ಮಗುರು ರೆ|ಪಾ| ಹೆರಾಲ್ಡ್ ಪಿರೇರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಅಭಿವೃದ್ಧಿಗೆ ಪುರುಷರ ಸಂಘಟನೆಯ ಪಾತ್ರ ಅರ್ಥಪೂರ್ಣ. ಚೇತನ ಪುರುಷರ ಮಹಾಸಂಘ ಸಮಾಜದ ಒಳಿತಿಗಾಗಿ ಮತ್ತು ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದರು ಎಲಿಜಾ ಡಿಸೋಜಾ, ಜೀವನ್ ಜ್ಯೋತಿ, ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿಯ ಸಮನ್ವಯ ಪುರುಷರ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಅಲ್ಟನ್ ರೆಬೆರೋ ಭಾಗವಹಿಸಿದ್ದರು.
ಸಂಪದ ಉಡುಪಿಯ ಸಂಯೋಜಕರಾದ ಸ್ಟಾನ್ಲಿ ಫೆರ್ನಾಂಡಿಸ್ ಅವರು ಪುರುಷರ ಗುಂಪಿನ ಅಭಿವೃದ್ಧಿ ಕುರಿತು ಮಾತನಾಡಿದರು. ಕಣಜಾರ್ ಚರ್ಚ್ 20 ಆಯೋಗದ ಸಂಯೋಜಕರಾದ ಶ್ರೀಮತಿ ಮೇಬಲ್ ನಜರೆತ್ ಮತ್ತು ರೆ.ಫಾ. ಜೋಯಲ್ ಅರಾನ್ಹಾ ವೆದಿಕೆನಲ್ಲಿ ಉಪಸ್ಥಿತರಿದ್ದರು.
ಪುರುಷರ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಎಡ್ವಿನ್ ಮೆಂಡೋನ್ಕಾ ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸಿದರು. ಕೋಶಾಧಿಕಾ ನೆಲ್ಸನ್ ಮಚಾದೊ ಸಹಕರಿಸಿದರು.
ಸಂಘದ ಖಜಾಂಚಿ ವಿಲ್ಸನ್ ನೊರೊನ್ಹಾ ಕ್ರೀಡಾಕೂಟಗಳ ಪಂದ್ಯಾವಳಿಗಳನ್ನು ನಡೆಸಿ, ಪ್ರಾಯೋಜಕರು ಹಾಗೂ ದಾನಿಗಳ ಹೆಸರನ್ನು ವಾಚಿಸಿದರು.
ಚೇತನಾ ಪುರುಷರ ಮಹಾಸಂಘದ ಅಧ್ಯಕ್ಷ ಆಂತೊನಿ ಮಿರಾಂದಾ ಸ್ವಾಗತಿಸಿ, ಕಾರ್ಯದರ್ಶಿ ರೊನಾಲ್ಡ್ ನಜರೆತ್ ವಂದಿಸಿದರು.
ವಿಜೇತರಿಗೆ ಸಂಘದ ಅಧ್ಯಕ್ಷ ಅಂತೊನಿ ಮಿರಾಂದಾ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಅನಿತಾ ಕ್ವಾಡ್ರಸ್ ಮತ್ತು ಕಣಜಾರು ಚರ್ಚ್ನ ಸಾಮಾಜಿಕ ಅಭಿವೃದ್ಧಿ ಆಯೋಗದ ಸಂಯೋಜಕರಾದ ಶ್ರೀಮತಿ ಮೇಬಲ್ ನಜರೆತ್ ಬಹುಮಾನಗಳನ್ನು ವಿತರಿಸಿದರು.
ಪ್ರಕಾಶ್ ಮಾರ್ಟಿಸ್ ಮತ್ತು ಜಾರ್ಜ್ ಡೆಸಾ ಕಾರ್ಯಕ್ರಮವನ್ನು ಸಂಯೋಜಿಸಿದರು.
`