ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ರತ್ನಾಕರ (52) ಎಂಬವರು ಮೊಬೈಲ್ ರಿಪೇರಿಗೆಂದು ಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ರತ್ನಾಕರ ಅವರು ಅ.22 ರಂದು ಸಂಜೆ 7 ಗಂಟೆಯ ವೇಳೆಗೆ ಮನೆಯಿಂದ ಮೊಬೈಲ್ ಸರಿ ಮಾಡಿಕೊಂಡು ಬರುತ್ತೀನೆಂದು ಹೇಳಿ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.